ಉಪ್ಪಿನಂಗಡಿ: ಬಿದ್ದು ಸಿಕ್ಕಿದ ಪರ್ಸ್ ವಾರೀಸುದಾರರಿಗೆ ಹಸ್ತಾಂತರ

0

ಉಪ್ಪಿನಂಗಡಿ: ದಾರಿಯಲ್ಲಿ ಬಿದ್ದು ಸಿಕ್ಕಿದ ಪರ್ಸ್ ಅನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಮಾನವೀಯತೆ ಮೆರೆದಿದ್ದಾರೆ.


ಅನಿ ಮಿನೇಜಸ್ ಅವರು ಪುತ್ತೂರಿಗೆ ಹೋಗುವ ಸಂದರ್ಭ ಅವರಿಗೆ ಉಪ್ಪಿನಂಗಡಿ- ಪುತ್ತೂರು ರಸ್ತೆಯ ಕೋಡಿಂಬಾಡಿ ಸಮೀಪ ರಸ್ತೆಯ ಮೇಲೆ ಪರ್ಸ್‌ವೊಂದು ಬಿದ್ದು ಸಿಕ್ಕಿತ್ತು. ಅದರಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ನಗದು, ಎಟಿಎಂನ ಸೀಕ್ರೆಟ್ ಪಿನ್ ನಂಬರ್‌ಗಳನ್ನು ಅದರ ಕವರ್‌ನಲ್ಲಿ ಬರೆದಿಡಲಾಗಿದ್ದ ಎರಡು ಎಟಿಎಂ ಕಾರ್ಡ್ ಹಾಗೂ ವ್ಯಕ್ತಿಯೋರ್ವರ ಕೆಲ ಪಾಸ್‌ಪೋರ್ಟ್ ಸೈಝ್ ಪೋಟೋ ಅದರಲ್ಲಿತ್ತು. ಪರ್ಸ್ ಬಿದ್ದು ಸಿಕ್ಕಿರುವ ಬಗ್ಗೆ ಅವರು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡು ವಾರೀಸುದಾರರು ಪರ್ಸ್ ಪಡೆದುಕೊಳ್ಳಲು ತಿಳಿಸಿದ್ದರು. ಅದರಂತೆ ಪರ್ಸ್ ಸಿಕ್ಕಿದ ಮೂರು ದಿನಗಳ ಬಳಿಕ ಮಡಂತ್ಯಾರಿನ ಸಂತೋಷ್ ಕುಮಾರ್ ಎಂಬವರು ಅವರನ್ನು ಸಂಪರ್ಕಿಸಿದ್ದು, ಅವರೇ ಆ ಪರ್ಸ್‌ನ ನೈಜ ವಾರೀಸದಾರರು ಎಂದು ಗೊತ್ತಾದ ಬಳಿಕ ಅವರಿಗೆ ಪರ್ಸ್ ಅನ್ನು ಹಿಂದುರಿಗಿಸಲಾಯಿತು.

LEAVE A REPLY

Please enter your comment!
Please enter your name here