ನಾಳೆ ಅಂಕತಡ್ಕದಲ್ಲಿ ಆರಾಧ್ಯ ವಾಣಿಜ್ಯ ಸಂಕೀರ್ಣ ಶುಭಾರಂಭ

0

ಸವಣೂರು : ಪಾಲ್ತಾಡಿ ಗ್ರಾಮದ ಅಂಕತಡ್ಕ ಸಿ.ಎ.ಬ್ಯಾಂಕ್  ಎದುರು ಆರಾಧ್ಯ ವಾಣಿಜ್ಯ ಸಂಕೀರ್ಣ ಅ.24ರಂದು ಶುಭಾರಂಭಗೊಳ್ಳಲಿದೆ.

ಪದ್ಮನಾಭ ಶೆಟ್ಟಿ ಚೆನ್ನಾವರ ಗುತ್ತಿನಮನೆ ಅವರು ದೀಪ ಪ್ರಜ್ವಲನೆ ,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸುವರು.ಸವಣೂರು ಗ್ರಾ.ಪಂ.ಅಧ್ಯಕ್ಷೆ  ಸುಂದರಿ ಬಿ.ಎಸ್.ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತರಾದ ರಾಕೇಶ್ ರೈ ಕೆಡೆಂಜಿ, ಪ್ರಸನ್ನ ಕುಮಾರ್ ಮಾರ್ತ,ಬೆಳ್ಳಾರೆ ಪೊಲೀಸ್ ಠಾಣೆಯ ಎಸೈ ಈರಯ್ಯ ಡಿ.ಎನ್., ಕೆಯ್ಯೂರು ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಚೆನ್ನಾವರ ಶಾಲೆಯ ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಸಿ.ಪಿ.ಸುಲೈಮಾನ್,ಉದ್ಯಮಿ ಸುಬ್ರಾಯ ಗೌಡ  ಪಾಲ್ಗೊಳ್ಳುವರು ಎಂದು ಮಾಲಕರಾದ ಬಾಲಕೃಷ್ಣ ರೈ ಚೆನ್ನಾವರ ಮತ್ತು ಮಕ್ಕಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here