ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಅಂಬೇಡ್ಕರ್ ಸಂಸ್ಮರಣಾ ದಿನ

0

ಪುತ್ತೂರು:ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಡಿ.6ರಂದು ಭಾರತದ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ರವರ ಸಂಸ್ಮರಣಾ ದಿನ ಆಚರಣೆಯನ್ನು ಆಚರಿಸಿದರು.


ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿ ಸೇಸಪ್ಪ ನೆಕ್ಕಿಲು ಮಾತನಾಡಿ ಅಂಬೇಡ್ಕರ್ ರವರ ರಚಿತವಾದ ಸಂವಿಧಾನದಿಂದ ಇಂದು ಪ್ರತಿಯೊಬ್ಬನಿಗೂ ಗೌರವ ಸಿಗಲು ಸಾಧ್ಯವಾಗಿದೆ ಎಂದರು.


ಬ್ಲಾಕ್ ಕಾಂಗ್ರೆಸ್ ಎಸ್ಟಿ ಘಟಕದ ಅದ್ಯಕ್ಷ ಮಹಾಲಿಂಗ ನಾಯ್ಕ ಮಾತನಾಡಿ, ಕಡು ಬಡವರು ಮತ್ತು ಶ್ರೀಮಂತರು ಭೇದ ಭಾವ ಮಾಡದೆ ಪ್ರತಿಯೊಬ್ಬನಿಗೂ ಸಮಾನ ಹಕ್ಕು ನಮ್ಮ ಸಂವಿಧಾನದಲ್ಲಿ ಅವಕಾಶ ಅಂಬೇಡ್ಕರ್ ರವರು ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಅಂಬೇಡ್ಕರ್ ಅವರ ಅದರ್ಶ ತತ್ವಗಳನ್ನು ಮುಂದಿನ ಜನಾಂಗಕ್ಕೆ ನಾವು ತಿಳಿಯಪಡಿಸಬೇಕು ಎಂದು ಹೇಳಿದರು.


ಮುಖೇಶ್ ಕೆಮ್ಮಿಂಜೆ ಸ್ವಾಗತಿಸಿದರು. ಎಸ್ಸಿ ಘಟಕದ ಪಧಾಧಿಕಾರಿ ಬಾಬು ಮರಿಕೆ ವಂದಿಸಿದರು. ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಜಾದ್, ನಗರ ಸಭಾ ಸದಸ್ಯ ರಾಬಿನ್ ತಾವ್ರೋ, ಬ್ಲಾಕ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಭಂಡಾರಿ, ಮುಂಡೂರು ವಲಯ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ, ಗೃಹಲಕ್ಷ್ಮಿ ಯೋಜನೆಯ ಸದಸ್ಯೆ ವಿಜಯಲಕ್ಷ್ಮಿ, ಆರ್ಯಾಪು ಗ್ರಾ.ಪಂ. ಸದಸ್ಯ ಯಾಕುಬ್ ಕುರಿಯ, ಅಬೂಬಕ್ಕರ್ ಮುಲಾರ್, ಜಾನ್ ಸಿರಿಲ್ ರೊಡ್ರಿಗಸ್, ಆದಂ ಕುಂಞಿ, ಸುರೇಶ್ ಸಾಲ್ಯಾನ್, ಮಾರ್ಥ ಅಜಲಡ್ಕ, ಮೋನಪ್ಪ ಕೆರೆಮೂಲೆ, ಅನಂದ ಕೆರೆಮೂಲೆ, ಸಿನಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here