ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕಲಾ ಬಾಗಿಲು ನಿವಾಸಿ ಇಫ್ತಿಕಾರ್ ಹಸನ್ ಮತ್ತು ಮುಮ್ತಾಜ್. ಕೆ ದಂಪತಿಯ ಪುತ್ರ, ಐದನೇ ತರಗತಿಯ ಮುಹಮ್ಮದ್ ಶೆಹಝಾದ್ ರಾಜ್ಯ ಮಟ್ಟದಲ್ಲಿ ಪ್ರಥಮ, ವಾಮದಪದವು ನಿವಾಸಿ ಮುಹಮ್ಮದ್ ವಸೀಂ ಶೇಖ್ ಮತ್ತು ತಬುಸುಂ ದಂಪತಿಯ ಪುತ್ರಿ, ಐದನೇ ತರಗತಿಯ ಫಾತಿಮಾ ವಫಾ , ಪುಂಜಾಲಕಟ್ಟೆ ನಿವಾಸಿ ಇಬ್ರಾಹಿಂ ಮತ್ತು ಜಮೀಲ ದಂಪತಿಯ ಪುತ್ರಿ, ಏಳನೇ ತರಗತಿಯ ಫಾತಿಮತ್ ರಿಶಾನ, ಅರ್ಕೆದೊಟ್ಟು ನಿವಾಸಿ ಚಂದ್ರಶೇಖರ ಎಸ್ ಮತ್ತು ದೀಪಾ ರವರ ಪುತ್ರನಾದ ಎರಡನೇ ತರಗತಿಯ ವಂದನ್ ಶೆಟ್ಟಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿದ್ದಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ, ಪೋಷಕರು ಶ್ಲಾಘಿಸಿದ್ದಾರೆ.