ಆರ್ಯಾಪು ಗ್ರಾ.ಪಂನಲ್ಲಿ ವಿಶೇಷಚೇತನ ವಿಶೇಷ ಗ್ರಾಮ ಸಭೆ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್‌ನ ವಿಶೇಷಚೇತನರ ವಿಶೇಷ ಗ್ರಾಮ ಸಭೆಯು ಫೆ.21ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ ಮಾತನಾಡಿ, ವಿಕಲಚೇತನ ಮಕ್ಕಳ ಬಗ್ಗೆ ಪೋಷಕರು ಚಿಂತೆಮಾಡಬೇಕಾಗಿಲ್ಲ. ಸಾಮಾನ್ಯ ಮಕ್ಕಳಂತೆ ಬೆಳೆಸಿ ಶಿಕ್ಷಣ ನೀಡಬೇಕು. ಇಂತಹ ಮಕ್ಕಳಿಗೆ ಸರಕಾರದಿಂದ ಮಾಸಾಶನ ಬರುತ್ತಿದ್ದು ವಿಶೇಷ ಚೇತನರು ಹುಟ್ಟಿನಿಂದ ದುಡಿಯಲು ಪ್ರಾರಂಭಿಸಿರುತ್ತಾರೆ. ಪೋಷಕರು ದೈರ್ಯ ಪಡೆದುಕೊಳ್ಳಬೇಕು. ಪ್ರಾಥಮಿಕ ಹಂತದಿಂದ ಪದವಿಯ ತನಕ ಉಚಿತ ಶಿಕ್ಷಣ ದೊರೆಯುತ್ತಿದ್ದು ಮಕ್ಕಳನ್ನು ವಿಶೇಷ ಶಾಲೆಗೆ ಕಳುಹಿಸದೇ ಸಾಮಾನ್ಯರಂತೆ ಇತರ ಶಾಲೆಗೆ ಕಳುಹಿಸಬೇಕು.


ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ.ಮಾತನಾಡಿ, ಪ್ರತಿ ವರ್ಷ ವಿಕಲಚೇತನ ಗ್ರಾಮಸಭೆ ನಡೆಸುವ ಮೂಲಕ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದನೆ ನೀಡಲಾಗುತ್ತದೆ. ವಿಕಲಚೇತನರ ಕಲ್ಯಾಣ ಇಲಾಖೆ, ಗ್ರಾ.ಪಂನಿಂದ ದೊರೆಯುವ ಸೌಲಭ್ಯಗಳ ಮಾಹಿತಿ ನೀಡುವುದಲ್ಲದೆ ಸಮಸ್ಯೆಗಳ ಕುರಿತು ಚರ್ಚಿಸಲು ಅವಕಾಶ ನೀಡಲಾಗುತ್ತಿದೆ.

ಸಂಪನ್ಮೂಲ ವ್ಯಕ್ತಿಯಾಗಿದ್ದ ತಾಲೂಕು ಮಟ್ಟದ ವಿಕಲಚೇತನರ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಮಾತನಾಡಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ದೊರೆಯುವ ವಿವಿಧ ಯೋಜನೆಗಳು ಹಾಗೂ ಸೋಲಾರ್ ಆಧಾರಿತ ಸ್ವಂತ ಉದ್ಯೋಗದಲ್ಲಿ ಶೇ.50ರಷ್ಟು ರಿಯಾಯಿತಿ ದೊರೆಯುವ ಬಗ್ಗೆ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತೆಯ ಪುತ್ತೂರು ಶಾಖೆಯ ಗೀತಾ ವಿಜಯ್ ಮಾತನಾಡಿ, ವಿಕಲಚೇತನರಿಗೆ ಬ್ಯಾಂಕಿನ ಅರೋಗ್ಯ ವಿಮೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 3 ಮಂದಿ ವಿಕಲಚೇತನರಿಗೆ ಶೇ.5 ಅನುದಾನದಲ್ಲಿ ವ್ಯೆದ್ಯಕೀಯ ವೆಚ್ಚದ ಚೆಕ್, ಅನಂತನಾಯಕ್‌ಗೆ ಶೇ.5 ಅನುದಾನದಲ್ಲಿ ವಾಕಿಂಗ್ ಸ್ಟಿಕ್ ವಿತರಿಸಲಾಯಿತು.
ಅರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಲಕ್ಷ್ಮಿಕಾಂತ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್ಯಾಪು ಗ್ರಾ.ಪಂ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ, ಹರೀಶ್ ನಾಯಕ್ ವಾಗ್ಲೆ, ಯಾಕೂಬ್ ಸುಲೈಮಾನ್, ವಿಶೇಷಚೇತನರು, ಪೋಷಕರು, ವಿಕಲಚೇತನರ ಸಂಜೀವಿನಿ ಸಂಘದ ಎಂಬಿಕೆ, ಕಾರ್ಯಕರ್ತರು, ಹಿರಿಯ ನಾಗರಿಕರು ಆಶಾಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ ಕಾರ್ಯದರ್ಶಿ ಮೋನಪ್ಪ.ಕೆ.ರ ವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here