ಪುತ್ತೂರು: ಮುಕ್ವೆ ಪಂಚವಟಿ ನಿವಾಸಿ, ಆಶುಕವಿ, ಸಾಹಿತಿ ಬಲ್ನಾಡು ಸುಬ್ಬಣ್ಣ ಭಟ್ಟ(95ವ.)ರವರು ಮಾ.23ರಂದು ಸಾಯಂಕಾಲ ಸ್ವಗೃಹದಲ್ಲಿ ನಿಧನರಾದರು.
ಸಾಹಿತ್ಯ ಅಲ್ಲದೇ ಇತರೇ ಹಲವಾರು ಕ್ಷೇತ್ರಗಳಲ್ಲಿ ಇವರು ಪರಿಣತರಾಗಿದ್ದರು. ಎಸ್ಕೆಎಸಿಎಂ ಸೊಸೈಟಿ ಪುತ್ತೂರು ಶಾಖೆಯಲ್ಲಿ ಮೇನೇಜರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು.
ಮೃತರು ಶ್ರೀರಾಮ ಕನ್ಸ್ಟ್ರಕ್ಷನ್ನ ಮಾಲಕ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷರೂ ಆದ ಪ್ರಸನ್ನ ಎನ್ ಭಟ್, ಶ್ರೀರಾಮ ಭಟ್, ಪುತ್ರಿಯರಾದ ಸೀತಾಲಕ್ಷ್ಮೀ, ಕಾಂಚನಮಾಲಾ, ಮಹಾಲಕ್ಷ್ಮೀ ಹಾಗೂ ಮೊಮ್ಮಕ್ಕಳು, ಮೂವರು ಸಹೋದರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಮಾ.೨೪ರಂದು ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.