ಪುತ್ತೂರು: ಪುಣ್ಚಪ್ಪಾಡಿ ಬಿಜೆಪಿ ಶಕ್ತಿ ಕೇಂದ್ರದ ಮಾಸಿಕ ಸಭೆಯು ಮಾ.23ರಂದು ಪುಣ್ಚಪ್ಪಾಡಿ ನೇರೋಳ್ತಡ್ಕ ಗೌರಿ ಸದನ ಸಭಾಂಗಣ ಜರಗಿತು. ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಮಹೇಶ್ ಕೆ ಸವಣೂರು, ಬೂತ್ 69 ರ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಕಾರ್ಯದರ್ಶಿ ಮೋಹಿತ್ ಕುಮಾರಮಂಗಲ,ಬೂತ್ 68 ರ ಅಧ್ಯಕ್ಷ ಧನರಾಜ್ ಓಡಂತರ್ಯ,ಕಾರ್ಯದರ್ಶಿ ಪ್ರಶಾಂತ್ ಗುಂಡ್ಯಯಡ್ಕ, ಸವಣೂರು ಗ್ರಾ ಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಗ್ರಾ ಪಂ ಸದಸ್ಯರಾದ ಗಿರಿಶಂಕರ ಸುಲಾಯ ದೇವಶ್ಯ, ಶೀನಪ್ಪ ಶೆಟ್ಟಿ ನೆಕ್ರಾಜೆ,ಯಶೋಧ ನೂಜಾಜೆ, ಸುಳ್ಯ ಮಂಡಲದ ಬಿಜೆಪಿ ಮಹಿಳಾ ಮೋರ್ಚದ ಕಾರ್ಯದರ್ಶಿ ಆಶಾ ರೈ ಕಲಾಯಿ, ಸವಣೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸೂರಪ್ಪ ಗೌಡ ಬದಿಯಡ್ಕ, ಪಕ್ಷದ ಪ್ರಮುಖರಾದ ವೆಂಕಟೇಶ ಭಟ್ ಅಂಜಯ, ಹರಿಪ್ರಸಾದ್ ನೆಕ್ರಾಜೆ, ಪುಟ್ಟಣ್ಣ ಗೌಡ ಬದಿಯಡ್ಕ, ನಾಗೇಶ್ ಓಡಂತರ್ಯ, ಗಂಗಾಧರ ಕನ್ಯಾ ಮಂಗಲ, ಲೋಕೇಶ್ ಕನ್ಯಾಮಂಗಲ, ನಿತಿನ್ ಪೂಜಾರಿಮೂಲೆ, ಹೇಮಲತಾ ಕುಮಾರ ಮಂಗಲ,ತಿರ್ಥನ್ ಬೊಳ್ಳಾಜೆ ಉಪಸ್ಥಿತರಿದ್ದರು.