ಪದ್ಮರಾಜ್‌ ಆರ್ ಪೂಜಾರಿಯವರು ಎಂ ಪಿ ಆಗಿಯೇ ಆಗ್ತಾರೆ: ಶಾಸಕ ಅಶೋಕ್ ರೈ

0

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮರಾಜ್ ಆರ್ ಪೂಜಾರಿಯವರು ಚುನಾವಣೆಯಲ್ಲಿ ಸೋತಿರಬಹುದು, ಆದರೆ ಜನರ ನಡುವೆ ಅವರ ಪ್ರೀತಿಯ ಒಡನಾಟ ಮುಂದುವರೆದಿದ್ದು ಮುಂದೆ ಅವರು ಎಂಪಿ ಆಗಿಯೇ ಆಗುತ್ತಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಪಮ್ಮಲೆ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಮಾತನಾಡಿದರು. ಚುನಾವಣೆಯಲ್ಲಿ ಸೋಲಾಗಿದೆ ಎಂದು ಪದ್ಮರಾಜ್‌ ಅವರು ಮನೆಯಲ್ಲಿ ಕೂರಲಿಲ್ಲ, ಇಡೀ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಿದ್ದಾರೆ. ಜಾತಿ,ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಅವರ ಮನಸ್ಸು ನಿಜಕ್ಕೂ ಅಭಿನಂದನಾರ್ಹ.‌ ಅವರ ಮುಂದಿನ ರಾಜಕೀಯ ಜೀವನ ಉಜ್ವಲವಾಗುವ ಕಾಲ ಬಂದೇ ಬರುತ್ತದೆ ಎಂದು ಅಶೋಕ್ ರೈ ಹೇಳಿದರು.
ವೇದಿಕೆಯಲ್ಲಿ‌ ಪಮ್ಮಲೆ ಜಮಾಅತ್ ಅಧ್ಯಕ್ಷ‌ ಮಹಮ್ಮದ್ ಬಡಗನ್ನೂರು, ಪುಡಾ‌ ಸದಸ್ಯ ನಿಹಾಲ್ ಪಿ ಶೆಟ್ಟಿ, ಉದ್ಯಮಿ ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here