ಪುತ್ತೂರು: 33/11 ಕೆ.ವಿ. ನೆಟ್ಲಮುಡ್ನೂರು -ಸವಣೂರು-ನೆಲ್ಯಾಡಿ ಮತ್ತು ಪುತ್ತೂರು- ಕಡಬ -ಸುಬ್ರಹ್ಮಣ್ಯ ವಿದ್ಯುತ್ ಮಾರ್ಗಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಎ.17ರಂದು ಪೂರ್ವಾಹ್ನ 9.30 ರಿಂದ ಸಾಯಂಕಾಲ 6.೦೦ ಗಂಟೆಯವರೆಗೆ 33/11ಕೆ.ವಿ. ಸವಣೂರು, 33/11ಕೆ.ವಿ ನೆಲ್ಯಾಡಿ, 33/11ಕೆ.ವಿ ಕಡಬ ಮತ್ತು 33/11ಕೆ.ವಿ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 33/11ಕೆವಿ ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.