ಪುತ್ತೂರು: ಆಟೋ ರಿಕ್ಷಾ ಚಾಲಕ ಬನ್ನೂರು ದಿ.ಬಿ ನಾರಾಯಣ ಆಚಾರ್ಯ ಅವರ ಪುತ್ರ ವಿನೋದ್ (37ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಏ.28ರಂದು ಸಂಜೆ ನಿಧನರಾದರು.
ಬನ್ನೂರು ಪರಿಸರದಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಅವರು ಇತರ ವಾಹನದಲ್ಲೂ ಬದಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಅನಾರೋಗ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ತಾಯಿ ಹೇಮಾವತಿ, ಸಹೋದರ ವಿಶಾಲ್ ಅವರನ್ನು ಅಗಲಿದ್ದಾರೆ.