ಪುತ್ತೂರು: ಇತಿಹಾಸ ಪ್ರಸಿದ್ಧ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮೇ.1ರಿಂದ ಮೇ.7ರವರೆಗೆ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಮಾರಿಪೂಜೆಯು ಜರಗಲಿರುವುದು.
ಮೇ.1ರಂದು ಎನ್. ಕೆ. ಜಗನ್ನಿವಾಸ ರಾವ್ ಅವರ ಗೌರವ ಉಪಸ್ಥಿತಿಯಲ್ಲಿ ಬೆಳಿಗ್ಗೆ 9:30ಕ್ಕೆ ಗೊನೆಮುಹೂರ್ತ ನಡೆಯಲಿದೆ.
ಮೇ.1 ರಿಂದ ಮೇ 4 ರವರೆಗೆ ರಾತ್ರಿ 7:30 ರಿಂದ ಭಜನೆ ನಂತರ ಮಹಾಪೂಜೆ, ಮೇ.5ರ ರಾತ್ರಿ ಗಂಟೆ 8:00ರಿಂದ ಶ್ರೀ ಅಲೇರ ಪಂಜುರ್ಲಿ ಮತ್ತು ಸತ್ಯಸಾರಮಣಿ ದೈವಗಳಿಗೆ ತಂಬಿಲ ಸೇವೆ ಮತ್ತು ಪ್ರಸಾದ ವಿತರಣೆ, ಮೇ 6ರ ಬೆಳಿಗ್ಗೆ 7:30ರಿಂದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕುರಾಯ ಕೆಮ್ಮಿಂಜೆ ಇವರ ನೇತ್ರತ್ವದಲ್ಲಿ ಗಣಪತಿ ಹೋಮ, ಪ್ರತಿಷ್ಠಾ ವರ್ಧಂತಿ , ಮೃತ್ಯುಂಜಯ ಹೋಮ, ಸತ್ಯನಾರಾಯಣ ಪೂಜೆ ನಂತರ ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 7:30ಕ್ಕೆ ಅಮ್ಮನವರಿಗೆ ಮಹಾಪೂಜೆ ನಂತರ ದೈವಗಳ ಗಡಿಸವಾರಿ, ಕಾಲೋನಿ ಸಂಚಾರ ರಾತ್ರಿ 12 ಗಂಟೆಗೆ ಅಗ್ನಿಸೇವೆ ನಂತರ ಅಮ್ಮನವರ ಭಂಡಾರ ಬಯಲು ಮಂಟಪಕ್ಕೆ ತೆರಳಿ ಮಹಾಪೂಜೆಯೂ ನಡೆಯಲಿದೆ.
ಮೇ.7: ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಮ್ಮನವರ ಹಾಗೂ ದೈವಗಳ ದರ್ಶನ ಮತ್ತು ಅಭಯ, ಹರಕೆ ಸ್ವೀಕಾರ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 6:30ಕ್ಕೆ ಅಮ್ಮನವರ ಉತ್ಸವ ಮೂರ್ತಿ ಮರಳಿ ದೇವಸ್ಥಾನಕ್ಕೆ ತೆರಳಿ ಮಹಾಪೂಜೆ ನಡೆಯಲಿದೆ.
ಆ ಪ್ರಯುಕ್ತ ಈ ಪೂಜಾ ಕಾರ್ಯಕ್ರಮದಲ್ಲಿ ಭಗವದ್ಬಕ್ತರಾದ ಎಲ್ಲರೂ ಭಾಗವಹಿಸಿ ತನು- ಮನ-ಧನಗಳ ಸಹಕಾರ ನೀಡಿಬೇಕೆಂದು ಪುತ್ತೂರು ಬಪ್ಪಳಿಗೆ ಶ್ರೀ ಮಾರಿಯಮ್ಮ ಜೀರ್ಣೋದ್ಧಾರ ಸಮಿತಿ ಮತ್ತು ಪೂಜಾ ಸೇವಾ ಸಮಿತಿ ಸಂಘಟಕರು ತಿಳಿಸಿದ್ದಾರೆ.