ನೆಲ್ಯಾಡಿ, ಕಾವು,ಬೆಟ್ಟಂಪಾಡಿ, ಪಾಣಾಜೆ ಕಡೆಗಳಲ್ಲಿ ಅಂಗಡಿ-ಮುಂಗಟ್ಟು ಬಂದ್

0

ನೆಲ್ಯಾಡಿ: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣ ಖಂಡಿಸಿ ಹಿಂದೂ ಸಂಘಟನೆ ನೀಡಿದ್ದ ಕರೆಯಂತೆ ನೆಲ್ಯಾಡಿ, ಗೋಳಿತ್ತೊಟ್ಟು, ಆತೂರು ಭಾಗದಲ್ಲಿ ಹಿಂದೂ ವರ್ತಕರ ಅಂಗಡಿ-ಮುಂಗಟ್ಟು ಬಂದ್ ಮಾಡಲಾಗಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ವರ್ತಕರ ಅಂಗಡಿ-ಮುಂಗಟ್ಟು ಎಂದಿನಂತೆ ತೆರೆದುಕೊಂಡಿವೆ.



ಕಾವು ಬಂದ್:
ಸಂಪೂರ್ಣ ಬೆಂಬಲ ಸೂಚಿಸಿ ಕಾವಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿದೆ.


ಬೆಟ್ಟಂಪಾಡಿ ಪಾಣಾಜೆ ಭಾಗಶಃ ಬಂದ್   

ಅಂಗಡಿ ಮುಂಗಟ್ಟುಗಳು ಬಂದ್ ಕರೆಗೆ ಸಂಪೂರ್ಣ ಬೆಂಬಲ ಸೂಚಿಸಿ ಬೆಟ್ಟಂಪಾಡಿ, ಆರ್ಲಪದವು ಭಾಗದಲ್ಲಿ ಸ್ವಯಂ ಘೋಷಿತವಾಗಿ ಬಂದ್ ಮಾಡಿದರು. ವಾಹನ ಸಂಚಾರಗಳು ಮತ್ತು ಜನರ ಓಡಾಟ ಬಹಳ ವಿರಳವಾಗಿತ್ತು.

LEAVE A REPLY

Please enter your comment!
Please enter your name here