ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾಕ್ಷಿಕ ತಾಳಮದ್ದಳೆಯು ಮೇ 18ರಂದು ನಡೆಯಿತು.


” ವಿದೂರಾತಿಥ್ಯ – ” ಪ್ರಮೀಳಾರ್ಜುನ ” ಪ್ರಸಂಗದೊಂದಿಗೆ ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಸತೀಶ್ ಇರ್ದೆ ತನ್ವೀ ಯಸ್ ಅನಂತಾಡಿ ಭಾಗವತರಾಗಿ, ಚೆಂಡೆಮದ್ದಲೆ ಗಳಲ್ಲಿ ಹಿರಿಯ ಕಲಾವಿದರಾದ ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ , ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಈಶ್ವರಮಂಗಲ, ಆದಿತ್ಯ ಕೃಷ್ಣ ದ್ವಾರಕ, ಅನೀಶ್ ಕೃಷ್ಣಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ ( ಭಾಸ್ಕರ್ ಬಾರ್ಯ ಮತ್ತು ವಿ.ಕೆ.ಶರ್ಮ ಅಳಿಕೆ ), ವಿದುರ ಮತ್ತು ದೂತಿ ( ಅಚ್ಯುತ ಪಾಂಗಣ್ಣಾಯ ಕೋಡಿಬೈಲು ), ಅರ್ಜುನ ( ಗುಡ್ಡಪ್ಪ ಬಲ್ಯ ), ಪ್ರಮೀಳ ( ಶುಭಾ ಜೆ ಸಿ ಅಡಿಗ ) ಸಹಕರಿಸಿದರು. ಪದ್ಮನಾಭ ಹಂದ್ರಟ್ಟ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here