ನಿಡ್ಪಳ್ಳಿ: ಸುರಿದ ಭಾರಿ ಮಳೆಗೆ ಪಾಣಾಜೆ ಗ್ರಾಮದ ಎಣ್ಣೆಗದ್ದೆ ಎಂಬಲ್ಲಿ ಅಬ್ದುಲ್ ಅಝೀಝ್ ಎಂಬುವರ ಮನೆಯ ಬಾವಿ ಕುಸಿದು ಬಿದ್ದಿದೆ.
ಆರ್ಲ ಪದವು ಅಪ್ಪಣ್ಣ ನಾಯ್ಕ ಅವರ ಮನೆಗೆ ಬರೆ ಜರಿದು ಬಿದ್ದು ಮನೆಯ ಗೋಡೆ ಹಾನಿಯಾಗಿದೆ. ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮುನಾತುಲ್ ಮೆಹ್ರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ, ಕಂದಾಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.