
ಉಪ್ಪಿನಂಗಡಿ: ಬಂಟ್ವಾಳ ತಾಲೂಕಿನ ಕಾಂಬೋಡಿ ಎಂಬಲ್ಲಿ ದುಷ್ಕರ್ಮಿಗಳಿಂದ ನಡೆದ ಮುಸ್ಲಿಂ ಯುವಕನ ಕೊಲೆ ಮತ್ತು ಮತ್ತೋರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಉಪ್ಪಿನಂಗಡಿಯ ಹೆಚ್ಚಿನ ಮುಸ್ಲಿಂ ವರ್ತಕರು ಮೇ.28ರಂದು ಸ್ವಯಂ ಪ್ರೇರಿತವಾಗಿ ತಮ್ಮ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದರು.
ದುಷ್ಕರ್ಮಿಗಳ ದಾಳಿಯಿಂದಾಗಿ ಕೊಳತ್ತಮಜಲು ನಿವಾಸಿ ರಹೀಂ ಸಾವನ್ನಪ್ಪಿದರೆ, ಆತನ ಜೊತೆಗಿದ್ದ ಶಾಫಿ ಗಂಭೀರ ಗಾಯಗೊಂಡಿದ್ದಾರೆ.