ಪುತ್ತೂರು: ಎರಕ್ಕಳ ತರವಾಡು ಮನೆಯ ಯಜಮಾನರಾದ ದಿ. ಎಲ್ಯಣ್ಣ ಗೌಡರವರ ಪತ್ನಿ ಕಮಲರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮೇ.28ರಂದು ಎರಕ್ಕಳ ಮನೆಯಲ್ಲಿ ನಡೆಯಿತು.
ಮೃತರ ಪುತ್ರರಾದ ತಾರಾನಾಥ ಎರಕ್ಕಳರವರು ಎಲ್ಲರನ್ನು ಸ್ವಾಗತಿಸಿ, ಕಮಲರವರ ಭಾವಚಿತ್ರದ ಎದುರು ದೀಪ ಬೆಳಗಿಸಿದರು. ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ವಿಶ್ವನಾಥ ಬದಿಕಾನರವರು ನುಡಿನಮನ ಸಲ್ಲಿಸಿ ಮಾತನಾಡಿ, ತಂದೆ ತಾಯಿಯರು ತಮ್ಮ ಮಕ್ಕಳನ್ನು ಪಾಲನೆ ಪೋಷಣೆ ಮಾಡುವ ಕಾರ್ಯ ಬೆಲೆ ಕಟ್ಟಲಾಗದ್ದು ತಮ್ಮ ಮಕ್ಕಳಿಗಾಗಿ ತಮ್ಮೆಲ್ಲ ಸುಖ ಸಂತೋಷವನ್ನೆಲ್ಲ ಬದಿಗಿಟ್ಟು ಅವರಿಗಾಗಿ ಆಸ್ತಿ ಸಂಪತ್ತು ಕೂಡಿಡುತ್ತಾರೆ. ಅಂತಹ ತಂದೆ ತಾಯಿಯರಿಗೆ ಮಕ್ಕಳು ದ್ರೋಹ ಮಾಡಬಾರದು. ವೃದ್ದಾಪ್ಯದಲ್ಲಿ ಅವರನ್ನು ಪೋಷಣೆ ಮಾಡುವುದು ಮಕ್ಕಳ ಕರ್ತವ್ಯ . ತಂದೆ ತಾಯಿಯರ ಆರೈಕೆ ಮಾಡುವ ಭಾಗ್ಯ ಎಲ್ಲರಿಗೆ ಸಿಗುವುದಿಲ್ಲ ಅದು ಕೆಲವರಿಗೆ ಮಾತ್ರ ಸಿಗುತ್ತದೆ .ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಕೈ ಬಿಡದೆ ಆಸರೆಯಾಗಿ ನಿಂತು ಅವರನ್ನು ಮುನ್ನಡೆಸುವ ಜವಾಬ್ದಾರಿ ಯುವಜನಾಂಗದ ಕರ್ತವ್ಯ ಎಂದು ಹೇಳಿದರು. ಮೃತರ ಸ್ಮರಣಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಮೃತರ ಗೌರವಾರ್ಥ ಅನ್ನ ಸಂತರ್ಪಣೆ ನಡೆಯಿತು. ಎರಕ್ಕಳ ಕುಟುಂಬದ ಬಂಧುಗಳು, ಗಣ್ಯರು ಕುಟುಂಬದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.