ಪುತ್ತೂರು: ಚಿಕ್ಕಪುತ್ತೂರು ಬಳಿ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆಂದು ಅಡಿಪಾಯ ತೆಗೆದು ಕಾಮಗಾರಿ ಮುಂದುವರಿಸದ ಕಾರಣ ಮಳೆ ನೀರಿನ ರಭಸಕ್ಕೆ ಮಣ್ಣು ಕೊರೆದು ಚಿಕ್ಕಪುತ್ತೂರು ಸಂಪರ್ಕದ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿಯಲ್ಲಿದೆ.
ಪುತ್ತೂರು ನೆಲ್ಲಿಕಟ್ಟೆ ಸ್ಮಶಾನದ ಮುಂದಿನಿಂದ ಹಾದು ಹೋಗುವ ಚಿಕ್ಕಪುತ್ತೂರು ಕಾಂಕ್ರೀಟ್ ರಸ್ತೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜನ್ನು ಸಂಪರ್ಕಿಸುವ ರಸ್ತೆಯಲ್ಲಿ ನಗರಸಭೆಯಿಂದ ತಡೆಗೋಡೆ ನಿರ್ಮಾಣಕ್ಕೆಂದು 20 ದಿನಗಳ ಹಿಂದೆ ಗುತ್ತಿಗೆದಾರರು ಅಡಿಯಲ್ಲಿನ ಕಾರ್ಮಿಕರು ಅಡಿಪಾಯ ತೆಗೆದು ಹೋದವರು ಮತ್ತೆ ಬರಲಿಲ್ಲ. ಆದರೆ ಕೆಲವು ದಿನಗಳಿಂದ ಆರಂಭಗೊಂಡ ಮಳೆಯಿಂದ ತೋಡಿನ ನೀರು ರಭಸದಿಂದ ಹರಿಯುತ್ತಿದ್ದು, ಮೇ.30ರ ರಾತ್ರಿಯ ಭಾರಿ ಮಳೆಗೆ ತೋಡಿನಲ್ಲಿ ಮಳೆ ನೀರಿನ ಹರಿವು ಹೆಚ್ಚಾಗಿ ನೀರಿನ ರಭಸಕ್ಕೆ ಮಣ್ಣು ಕೊಚ್ಚಿಹೋಗುತ್ತಿದ್ದು, ಕಾಂಕ್ರೀಟ್ ರಸ್ತೆಯ ಅಂಚಿನ ತನಕ ಮಣ್ಣುಕುಸಿಯುತ್ತಿದೆ. ಇದೀಗ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿಯಲ್ಲಿದೆ. ಇದೇ ರಸ್ತೆಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ತೆರಳುತ್ತಾರೆ. ಅಪಾಯ ಸಂಭವಿಸುವ ಮುಂದೆ ನಗರಸಭೆ ಎಚ್ಚೆತ್ತುಕೊಳ್ಳಬೇಕಾಗಿದೆ.
Home ಇತ್ತೀಚಿನ ಸುದ್ದಿಗಳು ಚಿಕ್ಕಪುತ್ತೂರು ಅಡಿಪಾಯ ತೆಗೆದು ಹೋದವರು ನಾಪತ್ತೆ – ಕಾಂಕ್ರೀಟ್ ರಸ್ತೆ ಸಂಪರ್ಕ ಕಡಿಯುವ ಭೀತಿ !