ಕೋಟಿ-ಚೆನ್ನಯ ಕಂಬಳ ಸಮಿತಿಯಿಂದ ವರ್ಷಿಣಿ ಆಳ್ವ, ನಿಹಾಲ್ ಶೆಟ್ಟಿಯವರಿಗೆ ಸನ್ಮಾನ

0

ಪುತ್ತೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 593 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ 8ನೇ ರ್‍ಯಾಂಕ್ ಗಳಿಸಿದ ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಕೋಟಿ-ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ಹಾಗೂ ಸೀಮಾ ಎಸ್.ಆಳ್ವ ದಂಪತಿ ಪುತ್ರಿಯಾಗಿರುವ ವರ್ಷಿಣಿ ಎಸ್.ಆಳ್ವ ಹಾಗೂ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ 5ನೇ ರ್‍ಯಾಂಕ್ ಗಳಿಸಿರುವ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಹಾಗೂ ಕಂಬಳ ಸಮಿತಿಯ ಪೋಷಕರಾದ ಹರೀಶ್ ಶೆಟ್ಟಿ ಹಾಗೂ ಶೀಲಾ ಹರೀಶ್ ಶೆಟ್ಟಿರವರ ಪುತ್ರ ನಿಹಾಲ್ ಎಚ್.ಶೆಟ್ಟಿಯವರನ್ನು ಮೇ.31ರಂದು ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಕೋಟಿ-ಚೆನ್ನಯ ಕಂಬಳ ಸಮಿತಿಯ ಕೋಶಾಧಿಕಾರಿಯಾಗಿರುವ ಈಶ್ವರ್ ಭಟ್ ಪಂಜಿಗುಡ್ಡೆರವರು ಪ್ರತಿಭಾವಂತ ವಿದ್ಯಾರ್ಥಿಗಳಾದ ವರ್ಷಿಣಿ ಎಸ್.ಆಳ್ವ ಹಾಗೂ ನಿಹಾಲ್ ಎಚ್.ಶೆಟ್ಟಿರವರುಗಳನ್ನು ಕೋಟಿ-ಚೆನ್ನಯ ಕಂಬಳ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಮುಂದಿನ ನಿಮ್ಮ ಶೈಕ್ಷಣಿಕ ಜೀವನವು ಉತ್ತುಂಗದತ್ತ ಸಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸನ್ಮಾನಿತರಾದ ವರ್ಷಿಣಿ ಎಸ್.ಆಳ್ವರವರ ತಂದೆ ಉದ್ಯಮಿ ಶಿವರಾಮ ಆಳ್ವ, ತಾಯಿ ಸೀಮಾ ಎಸ್.ಆಳ್ವ, ನಿಹಾಲ್ ಎಚ್ ಶೆಟ್ಟಿರವರ ತಂದೆ ಹರೀಶ್ ಶೆಟ್ಟಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಈಶ್ವರ್ ಬೆಡೇಕರ್, ವಿನಯಕುಮಾರ್, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಕಾರ್ಯದರ್ಶಿ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಪಿ.ವಿ, ಸದಸ್ಯರಾದ ವಿಕ್ರಂ ಶೆಟ್ಟಿ ಅಂತರ, ಗಂಗಾಧರ ಶೆಟ್ಟಿ ಕೈಕಾರ, ಚಂದ್ರಹಾಸ ಬನ್ನೂರು, ರೋಶನ್ ರೈ ಬನ್ನೂರು, ರಂಜಿತ್ ಬಂಗೇರ ಕೆ, ಸುದೇಶ್ ಕುಮಾರ್ ನೆಲ್ಲಿಕಟ್ಟೆ, ಮಿಥುನ್ ಶೆಟ್ಟಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಶಶಿಕಿರಣ್ ರೈ ನೂಜಿ, ಗಂಗಾಧರ್ ಶೆಟ್ಟಿ ಕೈಕಾರ, ಸಂತೋಷ್ ಗೌಡ, ನವೀನ್ ಕುಮಾರ್ ಉಪಸ್ಥಿತರಿದ್ದರು.

ದೇವಸ್ಥಾನದಲ್ಲಿ ಪ್ರಾರ್ಥನೆ..
ಕಾರ್ಯಕ್ರಮದ ಮೊದಲು ಸನ್ಮಾನಿತ ಈರ್ವರು ವಿದ್ಯಾರ್ಥಿಗಳಾದ ವರ್ಷಿಣಿ ಎಸ್ ಆಳ್ವ ಹಾಗೂ ನಿಹಾಲ್ ಎಚ್.ಶೆಟ್ಟಿರವರ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲೆಂದು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ದೇವಸ್ಥಾನದ ಅರ್ಚಕರು ಪೂಜಾವಿಧಿಗಳನ್ನು ನೆರವೇರಿಸಿ ಈರ್ವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹರಸಿದರು.

LEAVE A REPLY

Please enter your comment!
Please enter your name here