ಕಾರಿಗೆ ಸೈಡ್ ಬಿಡದ ಹಿನ್ನಲೆ ಮಾತಿನ ಚಕಮಕಿ – ಠಾಣೆ ಮೆಟ್ಟಿಲೇರಿದ ಕಾಲೇಜು ವಿದ್ಯಾರ್ಥಿಗಳ ವಾಗ್ವಾದ

0
ಸಾಂದರ್ಭಿಕ ಚಿತ್ರ

ಪುತ್ತೂರು: ಪುತ್ತೂರಿನಿಂದ ಸುಳ್ಯ ಕಡೆಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವಿದ್ಯಾರ್ಥಿನಿಯರು ಕಾರಿಗೆ ಸೈಡ್ ಬಿಡಲಿಲ್ಲವೆಂದು ಇನ್ನೊಂದು ಕಾರಿನವರ ಜೊತೆ ಮಾತಿನ ಚಕಮಕಿ ನಡೆಸಿದ್ದು, ಘಟನೆ ಸುಳ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಗ್ಗೆ ವರದಿಯಾಗಿದೆ.

ಪುತ್ತೂರಿನ ಕಾಲೇಜೊಂದರ ಇಬ್ಬರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ಒಂದು ಕಾರಿನಲ್ಲಿ ಸುಳ್ಯದ ಕಡೆಗೆ ತೆರಳುತ್ತಿದ್ದರೆನ್ನಲಾಗಿದೆ. ಅವರಿಗೆ ಜಾಲ್ಸೂರಿನಿಂದೀಚೆಗೆ ಇನ್ನೊಂದು ಕಾರು ಸೈಡ್ ಬಿಡಲಿಲ್ಲವೆನ್ನಲಾಗಿದೆ. ಈ ವೇಳೆ ಅವರು ಆ ಕಾರನ್ನು ಓವರ್‌ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಅವರ ಜೊತೆ ಮಾತಿನ ಚಕಮಕಿ ನಡೆಸಿದ್ದು, ವಾಗ್ವಾದ ಕೇಳಿ ಸಮೀಪದ ಮನೆಯಲ್ಲಿದ್ದ ಜಾಲ್ಸೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಡ್ಕಾರ್ ಮತ್ತು ಅವರ ಸಹೋದರ ಅಲ್ಲಿಗೆ ಆಗಮಿಸಿದ್ದು. ಈ ವೇಳೆ ಹೈವೆ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸ್ ಎಎಸ್‌ಐ ಉದಯ್ ಭಟ್‌ ಸ್ಥಳಕ್ಕೆ ಆಗಮಿಸಿದರು.

ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪೊಲೀಸ್ ಠಾಣೆಗೆ ಕರೆ ತಂದು ಠಾಣೆಯಲ್ಲಿ ವಿಚಾರಿಸುವಾಗ ಅವರು ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿಗಳೆಂದೂ ನಾಲ್ಕು ಜನ ಜೊತೆಯಾಗಿ ಬಂದಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here