ಕೆಯ್ಯೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಧರೆ ಕುಸಿತ : ಹಲವು ಮನೆಗಳಿಗೆ ಹಾನಿ, ಅಧಿಕಾರಿಗಳಿಂದ ಪರಿಶೀಲನೆ

0

ಪುತ್ತೂರು: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಧರೆ ಕುಸಿತಗೊಂಡಿದ್ದು ಮನೆಗಳಿಗೆ ಹಾನಿಯುಂಟಾಗಿದೆ. ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು, ಸದಸ್ಯರು,ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮದ ಸಣಂಗಳ ಎಂಬಲ್ಲಿ ಗೋವಿಂದ ನಾಯ್ಕ ಎಂಬವರ ಮನೆಯ ಹಿಂಬದಿಯ ಧರೆ ಕುಸಿತಗೊಂಡಿದ್ದು ಹಾನಿಯುಂಟಾಗಿದೆ. ಗಣೇಶ್ ನಿಡ್ವಣ್ಣಾಯ ಎಂಬವರ ಮನೆಯ ಹಿಂಬದಿಯ ಧರೆ ಕುಸಿತಗೊಂಡು ಮನೆಗೆ ಹಾನಿ ಸಂಭವಿಸಿದೆ. ಎರಕ್ಕಳ ಬೆಳಿಯಪ್ಪ ಗೌಡ ಎಂಬವರ ಮನೆಗೂ ಧರೆ ಕುಸಿತದಿಂದ ಹಾನಿಯಾಗಿದೆ. ಇದಲ್ಲದೆ ಎರಕ್ಕಳ ಎಂಬಲ್ಲಿ ಮನೆಯಂಗಳಕ್ಕೆ ನೀರು ನುಗ್ಗಿದ ಪರಿಣಾಮ ಜಯಂತಿ ಗೌಡ ಎಂಬವರ ಕುಟುಂಬವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.


ಘಟನೆ ನಡೆದ ಸ್ಥಳಗಳಿಗೆ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ವಿಜಯ ಕುಮಾರ್, ಸುಭಾಷಿಣಿ ಹಾಗೂ ಗ್ರಾಮ ಸಹಾಯಕ ನಾರಾಯಣ, ಗ್ರಾಪಂ ಸಿಬ್ಬಂದಿ ಧರ್ಮಣ್ಣ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here