ಪುತ್ತೂರು: ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭದ್ರತಾ ಕೋಶವನ್ನು ಸೇವಾ ರೂಪದಲ್ಲಿ ಸಮರ್ಪಣೆ ಮಾಡಿದ ನಳಿಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ರೈ ಅವರನ್ನು ದೇವಳದ ಆಡಳಿತ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಭಾಸ್ಕರ ಬಾರ್ಯ ಪುತ್ತೂರು ಮತ್ತು ಶ್ರೀ ನಳಿಲು ಕ್ಷೇತ್ರದ ಅರ್ಚಕ ಪ್ರವೀಣ್ ಶಂಕರ್ ಅವರು ಸಂತೋಷ ಕುಮಾರ್ ರೈ ದಂಪತಿಯನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಡಾ.ವೀಣಾ ಸಂತೋಷ್ ರೈ, ಡಾ. ಸುಚೇತ ಜೆ ಶೆಟ್ಟಿ, ಸುರೇಶ್ ರೈ, ವಿದ್ಯಾ ಪ್ರಭಾಕರ್ ಬಾರ್ಯ, ಪ್ರಿಶಾ ರೈ, ಸಾನ್ವಿ ರೈ ಉಪಸ್ಥಿತರಿದ್ದರು. ಭಾಸ್ಕರ್ ಬಾರ್ಯ ಸ್ವಾಗತಿಸಿ, ಬಾರ್ಯ ದೇವಳದ ಟ್ರಸ್ಟ್ ಸದಸ್ಯೆ ನವೀನ ಬಾರ್ಯ ಸನ್ಮಾನ ಪತ್ರ ವಾಚಿಸಿದರು. ವಿಜಯಲಕ್ಷ್ಮಿ ರೈ ಬಾರ್ಯ ವಂದಿಸಿದರು.