ಸರಕಾರಿ ವಕೀಲ ಉಲ್ಲಾಸ್ ಎಚ್ ಅವರ ಕಚೇರಿ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಉದ್ಘಾಟನೆ

0

ಬಡವರಿಗೆ ನ್ಯಾಯ ಕೊಡಿಸುವಲ್ಲಿ ಉತ್ತಮ ಕೆಲಸ ನಿರ್ವಹಿಸಿ – ಅಶೋಕ್ ಕುಮಾರ್ ರೈ

ಪುತ್ತೂರು: ಸರಕಾರಿ ವಕೀಲರಾಗಿ ನೇಮಕವಾದ ಉಲ್ಲಾಸ್ ಎಚ್ ಅವರ ಕಚೇರಿಯು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಜೂ.3ರಂದು ಉದ್ಘಾಟನೆಗೊಂಡಿತು.


ಶಾಸಕ ಅಶೋಕ್ ಕುಮಾರ್ ರೈ ಅವರು ಕಚೇರಿ ಉದ್ಘಾಟಿಸಿ ಮಾತನಾಡಿ ಉಲ್ಲಾಸ್ ಎಚ್ ಅವರು ಒಳ್ಳೆಯ ಯುವಕ, ಪಕ್ಷಕ್ಕೂ ಕೂಡಾ ಸಹಕಾರಿಯಾಗಿದ್ದಾರೆ. ಅವರಿಂದ ಎಲ್ಲರಿಗೂ ನ್ಯಾಯ ಸಿಗುವಂತಾಗಲಿ. ಕೋರ್ಟ್ ವಿಚಾರದಲ್ಲಿ ನಾವು ಹಸ್ತಾಕ್ಷೇಪ ಮಾಡುವುದಿಲ್ಲ. ಬಡವರಿಗೆ ನ್ಯಾಯ ಕೊಡಿಸುವಲ್ಲ ಉತ್ತಮ ಕೆಲಸ ಆಗಲಿ ಎಂದರು.


ಈ ಹುದ್ದೆಯಲ್ಲಿರುವಾಗ ಜೋರಾಗಿರಿ:
ನ್ಯಾಯವಾದಿ ಮಹೇಶ್ ಕಜೆ ಅವರು ಮಾತನಾಡಿ ಉಲ್ಲಾಸ್ ಎಚ್ ಅವರು ಪುತ್ತೂರು ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಿಗೆ, ಸರಕಾರಿ ವ್ಯವಸ್ಥೆಯನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವ ಅತ್ಯಂತ ಜವಾಬ್ದಾರಿಯುತ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಅವರು ಸೌಮ್ಯ ಸ್ವಭಾವದಲ್ಲಿರುವವರು. ಆದರೆ ಈ ಹುದ್ದೆಯಲ್ಲಿರುವಾಗ ಸ್ವಲ್ಪ ಜೋರಾಗಿರಿ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ಪಿ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಕೊಳತ್ತಾಯ, ತಾಲೂಕು ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಜಿಲ್ಲಾ ಕಾಂಗ್ರಸ್ ಪಕ್ಷ ಮುರಳೀಧರ ರೈ ಮಠಂತಬೆಟ್ಟು, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಉಲ್ಲಾಸ್ ಕೋಟ್ಯಾನ್, ಶಿವರಾಮ್ ಆಳ್ವ, ನಾರಾಯಣನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here