ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿವೇಕ ಅಭಿನಂದನಮ್

0

ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ವಿವೇಕ ಅಭಿನಂದನಮ್' ಮೇ ೩೧ ರಂದು ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಜರಗಿತು. ವಿದ್ಯಾರ್ಥಿಗಳನ್ನು ಅವರ ಪೋಷಕರ ಜೊತೆಗೆ ಅಭಿನಂದಿಸಿ ಗೌರವಿಸಲಾಯಿತು. ಸನ್ಮಾನ ನೆರವೇರಿಸಿದ ವಿಧಾನಪರಿಷತ್ ಸದಸ್ಯ ಎಂ.ಆರ್. ರವಿಕುಮಾರ್ ರವರು ವಿದಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿನಿಮ್ಮ ಸಾಧನೆಯ ಅಂಕದ ಹಿಂದೆ ನಿಮ್ಮ ಪೋಷಕರು, ಶಿಕ್ಷಕರು ಇದ್ದಾರೆ. ಅವೆಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಪರಿಶ್ರಮವಿದೆ. ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಪ್ರತಿಭಾವಂತರಿಗೆ ಅಪ್ರತಿಮ ಪ್ರತಿಭಾನ್ವಿತರಾಗಿದ್ದವರು ಸ್ವಾಮಿ ವಿವೇಕಾನಂದರು. ಶಾಲೆಯ ಒಳಗಡೆ ಇರುವ ಮಕ್ಕಳ ಮೇಲೆ ಈ ದೇಶದ ಭವಿಷ್ಯ ಅಡಗಿದೆ. ಡ್ರಗ್ಸ್, ಮೊಬೈಲ್‌ಗೆ ಬಲೆಗೆ ಬಿದ್ದು ಮಕ್ಕಳು ಹಾದಿ ತಪ್ಪುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಬೇಕಾದ ಶಿಕ್ಷಣ ಮನೆಯಲ್ಲಿ ಸಿಗದೇ ಇರುವುದರಿಂದ ಶಾಲಾ ಶಿಕ್ಷಣ ಅತೀ ಅವಶ್ಯಕವಾಗಿದೆ. ಜೀವನದಲ್ಲಿ ಪ್ರಾಕ್ಟಿಕಲ್ ಅನುಭವಗಳೇ ಯಶಸ್ಸಿನತ್ತ ಕೊಂಡೊಯ್ಯಬಲ್ಲುದು. ಎಸ್‌ಎಸ್‌ಎಲ್‌ಸಿ ಪಾಸ್ ಜತೆಗೆ ಜೀವನದಲ್ಲಿಯೂ ಉತ್ತೀರ್ಣಗೊಳ್ಳುವ ರೀತಿಯಲ್ಲಿ ನಾವು ತಯಾರಾಗಬೇಕು. ರ‍್ಯಾಂಕ್ ಬಂದ ಎಲ್ಲಾ ವಿದ್ಯಾರ್ಥಿಗಳು ಜೀವನದಲ್ಲಿಯೂ ರ‍್ಯಾಂಕ್ ಪಡೆಯುವವರಾಗಿರಬೇಕು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳೂ ಉದ್ಯೋಗಕ್ಕಾಗಿ ಪೋಷಕರನ್ನು ಅವಲಂಬಿಸುವವರಾಗಿರಬಾರದು. ನಮ್ಮ ಪುಸ್ತಕಗಳಿಗಷ್ಟೇ ನಾವು ಸೀಮಿತರಾಗಬಾರದು. ಪ್ರಾಪಂಚಿಕ ಅನುಭವ, ಗತ ಮಹಾತ್ಮರ ಚರಿತ್ರೆಗಳು ನಮ್ಮಲ್ಲಿ ಶಕ್ತಿ, ಧೈರ್ಯ, ಸ್ಥೆöÊರ್ಯ ಹೆಚ್ಚಿಸಿ ಸಕಲ ವಿಧದಲ್ಲೂ ನಾವು ಸಾಧನೆ ಮಾಡಿ ತೋರಿಸುವ ಮನೋಭಾವ ಬೆಳೆಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಶೇಷವಾಗಿ ಪೋಷಕರಿಗೆ ಅಭಿನಂದನೆ ಸಲ್ಲಿಸಿದ ರವಿಕುಮಾರ್ ರವರು `ನೀವು ನಿಮ್ಮ ಮಕ್ಕಳನ್ನು ಬೆಳಸುತ್ತಿರುವ ಜೊತೆಗೆ ದೇಶವನ್ನೂ ಬೆಳೆಸುತ್ತಿದ್ದೀರಿ’ ಎಂದರು.

ದೀಪ ಬೆಳಗಿಸಿ ಉದ್ಘಾಟಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ರವರು ಮಾತನಾಡಿ ಈ ಸಾಧನೆ ಸಾಮಾನ್ಯವಾದುದಲ್ಲ. ನಿಮ್ಮ ಫಲಿತಾಂಶದಿAದಾಗಿ ಪೋಷಕರು ಹೆಮ್ಮೆಪಡುವಂತಾಗಿದೆ. ಪೋಷಕರು ಹೆಮ್ಮೆಪಟ್ಟಾಗ ನಿಮ್ಮ ಜೀವನದ ಸಾರ್ಥಕತೆಯ ಪ್ರಥಮ ಮೆಟ್ಟಿಲು ಇದಾಗಿದೆ. ನಿಮ್ಮನ್ನು ಈ ಎತ್ತರಕ್ಕೆ ಏರಿಸಿದ ಪೋಷಕರಿಗೆ ಸಲ್ಲಿಸುವ ಮೊದಲನೇ ಕೃತಜ್ಞತೆ ಇದಾಗಿದೆ. ತಮ್ಮ ಮನೆಯ ಕೆಲಸ, ಒತ್ತಡ ಬದಿಗಿರಿಸಿ ಮಕ್ಕಳಿಗಾಗಿ ಅವಿರತ ಶ್ರಮವಹಿಸಿದ ಶಿಕ್ಷಕರಿಗೆ ನಮ್ಮ ಎರಡನೇ ಕೃತಜ್ಞತೆಯಾಗಿದೆ. ಜೀವನದ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾದರೆ ದೇವರ ಮೇಲೆ ಶ್ರದ್ಧೆ ಬೇಕು. ನಮ್ಮನ್ನು ಹೊತ್ತ ಭೂಮಿ ಅಥವಾ ದೇಶವನ್ನು ಮರೆಯಬಾರದು. ನಮಗೆ ಗುಣನಿರ್ಮಾಣ ಪಾತ್ರವಹಿಸಿದ ಗುರು ಹಿರಿಯರನ್ನು ನಿರ್ಲಕ್ಷಿಸಬಾರದು. ಅವರು ಯಾವತ್ತೂ ತಲೆತಗ್ಗಿಸಿ ನಡೆಯುವಂತಾಗಬಾರದು. ನಾನು ಹೇಗಿರಬೇಕೆಂಬುದನ್ನು ತಿಳಿದಿರಬೇಕು' ಎಂದ ಅವರುವಿವೇಕಾನಂದ ಪಿಯುಸಿಯಲ್ಲಿ ನಡೆಸಿದ ಮೇಧಾ ಪರೀಕ್ಷೆಯಲ್ಲಿ ರಾಜ್ಯದ ೬೩೫ ಮಕ್ಕಳ ಪೈಕಿ ಟಾಪ್ ೨೫ ಮಕ್ಕಳನ್ನು ಆರಿಸಲಾಗಿತ್ತು. 25 ರ ಪೈಕಿ10 ವಿದ್ಯಾರ್ಥಿಗಳು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮಕ್ಕಳು ಎಂದು ಹೇಳಲು ಹೆಮ್ಮೆಪಡುತ್ತೇವೆ’ ಎಂದರು. ಇಲ್ಲಿ ಕಲಿತ ಮಕ್ಕಳು ಶಿವಾಜಿ, ಮೋದಿ, ದೋವಲ್, ಜೈಶಂಕರ್‌ರAತ ವ್ಯಕ್ತಿಗಳಾಗಿ ಹೊರಗೆ ಬರುವಂತಾಗಬೇಕು’ ಎಂದರು.

ಸನ್ಮಾನ
ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ತಾಲೂಕು ಪಡೆದಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ರವರನ್ನು ಇದೇ ವೇಳೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಲೋಕೇಶ್ ಎಸ್. ಆರ್. ರವರು `ಪುತ್ತೂರು ತಾಲೂಕಿನಲ್ಲಿ ಉತ್ತಮ ಫಲಿತಾಂಶ ಲಭಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಲು ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ. ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ದೇಶಕ್ಕೆ ಕೊಡುಗೆಯಾಗಿ ನಿರ್ಮಾಣವಾಗುವಲ್ಲಿ ವಿವೇಕಾನಂದ ಸಂಸ್ಥೆಯಿAದ ಉತ್ತಮ ಕೆಲಸ ನಡೆಯುತ್ತಿದೆ. ವಿವೇಕಾನಂದರ ಜೀವನ ಚರಿತ್ರೆ ತಿಳಿದುಕೊಂಡ ಒಬ್ಬ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ಹೊರಹೊಮ್ಮಬಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಣ್ಣಾ ಹಜಾರೆಯಾಗಿದ್ದಾರೆ’ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ ಕೆ. ಮಾತನಾಡಿ `ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಅನೇಕ ವಿದ್ಯಾಸಂಸ್ಥೆಗಳು ಇಂದು ಸಂಸ್ಕಾರ ಸಂಸ್ಕೃತಿಯ ಕಲಿಕೆಯ ಜೊತೆಗೆ ಶೈಕ್ಷಣಿಕ, ಕ್ರೀಡೆ, ಪ್ರತಿಭೆಗಳಲ್ಲಿ ಸಾಧನೆ ತೋರುತ್ತಿರುವುದು ಇಡೀ ಸಂಘಕ್ಕೆ ಹೆಮ್ಮೆಯ ವಿಚಾರವಾಗಿದೆ. ವಿದ್ಯಾವರ್ಧಕ ಸಂಘದ ಧ್ಯೇಯ ಉದ್ದೇಶಗಳನ್ನು ಈಡೇರಲು ಈ ಎಲ್ಲಾ ಸಂಸ್ಥೆಗಳ ಕೊಡುಗೆ ಅನನ್ಯವಾದುದು. ಆ ನಿಟ್ಟಿನಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಮತ್ತು ಆಡಳಿತ ಮಂಡಳಿಗೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

ಶಿಕ್ಷಕರು ಪೋಷಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ – ಕೃಷ್ಣಪ್ರಸಾದ್
ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿನಿ ಚಿನ್ಮಯಿ ರವರ ತಂದೆ, ದಂತವೈದ್ಯರಾದ ಡಾ. ಕೃಷ್ಣಪ್ರಸಾದ್ ರವರು ಮಾತನಾಡಿ “ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿಯಲ್ಲಿ ಶಿಕ್ಷಕರು ಪೋಷಕರ ರೀತಿಯಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಬೆಳೆದುಬಂದAತೆ ಅವರಿಗೆ ಶಿಸ್ತು, ಸಂಯಮ ಕಲಿಸಿಕೊಟ್ಟು ಪೋಷಕರಂತೆ ಬೆಳೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇವೆಲ್ಲವನ್ನೂ ನಿರ್ವಹಣೆ ಮಾಡುತ್ತಿರುವ ಮುಖ್ಯಶಿಕ್ಷಕರು, ಸಕ್ರೀಯ ಆಡಳಿತ ಮಂಡಳಿ ಎಲ್ಲವೂ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ. ಶೈಕ್ಷಣಿಕವಾಗಿ ಜೊತೆ ಜೊತೆಗೆ ಕ್ರೀಡೆ ಸೇರಿದಂತೆ ಇನ್ನಿತರ ಪಠ್ಯೇತರ ಚಟುವಟಿಕೆಗಳಿಗೆ ಇಲ್ಲಿ ವಿಪುಲ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ’ ಎಂದರು.

ವಿವೇಕಾನAದ ಪದವಿಪೂರ್ವ ಕಾಲೇಜಿನ ನಿಯೋಜಿತ ಪ್ರಾಂಶುಪಾಲ ದೇವಿಚರಣ್ ರೈ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನುಭೋಗ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರಶಾಂತ್ ಆಚಾರ್, ಶಾಲಾ ಸಂಚಾಲಕ ರವಿನಾರಾಯಣ ರವರು ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

ವಿವೇಕಾನಂದ ಲಾ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಯಶೋಧರ ಜೈನ್, ಎಸ್.ಜಿ. ಕೃಷ್ಣ, ನಿವೃತ್ತ ಶಿಕ್ಷಕ ಬಿ.ವಿ. ಶಗ್ರಿತ್ತಾಯ, ಪ್ರಮುಖರಾದ ಯತೀಶ್, ಶಿವಕುಮಾರ್, ಆಡಳಿತ ಮಂಡಳಿ ಹಾಗೂ ಶಿಕ್ಷಕರಕ್ಷಕ ಸಂಘದ ಪದಾಧಿಕಾರಿಗಳು, ಸದಸ್ಯರು, ಪೋಷಕರು ಪಾಲ್ಗೊಂಡರು.

ಪ್ರಸ್ತಾವನೆಗೈದು ಸ್ವಾಗತಿಸಿದ, ಶಾಲಾ ಮುಖ್ಯಗುರು ಸತೀಶ್ ಕುಮಾರ್ ರೈಯವರು, `ಈ ವರ್ಷ ಅತ್ಯಂತ ಪರಿಣಾಮಕಾರಿ ಫಲಿತಾಂಶ ಪಡೆದುಕೊಂಡಿದ್ದೇವೆ. ರಾಜ್ಯಕ್ಕೆ ಎರಡನೇ ಸ್ಥಾನ ನಮ್ಮ ಸಂಸ್ಥೆಯ ವಿದ್ಯಾರ್ಥಿನಿಗೆ. ಮೂರನೇ, ನಾಲ್ಕನೇ ಸ್ಥಾನದ ಜೊತೆಗೆ 600 ಕ್ಕಿಂತ ಅಧಿಕ ಅಂಕ ಪಡೆದ ಹೆಚ್ಚು ವಿದ್ಯಾರ್ಥಿಗಳ ಶಾಲೆ ನಮ್ಮದಾಗಿದೆ. ಈ ಬಾರಿ ಗುಣಾತ್ಮಕ ಫಲಿತಾಂಶದಲ್ಲಿ 92.66 ಶೇಕಡಾಕ್ಕೆ ಏರಿಕೆಯಾಗಿದೆ. ಬರುವ ವರ್ಷ ಶೇಕಡಾ 95 ಗೆ ಏರಿಸಬೇಕೆಂಬ ಉದ್ದೇಶ ನಮ್ಮಲ್ಲಿದ್ದು, ಆ ಪ್ರಯತ್ನದಲ್ಲಿ ಮುಂದೆ ಸಾಗಲಿದ್ದೇವೆ. ಎಲ್ಲಾ ಮಕ್ಕಳು ಪ್ರಥಮ ಶ್ರೇಣಿಗಿಂತ ಅಧಿಕವಾಗಿ ಫಲಿತಾಂಶ ಬರುವಂತೆ ನಾವು ಪ್ರಯತ್ನ ಮಾಡುತ್ತೇವೆ’ ಎಂದರು. ಪೋಷಕರ ಪರವಾಗಿ ವಕೀಲ ಪ್ರಕಾಶ್ ಕೆ. ರವರು ವಿದ್ಯಾಸಂಸ್ಥೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಕ್ಷಕಿ ರೇಶ್ಮಾ ಪ್ರಾರ್ಥಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಂಧ್ಯಾ ಕೆ ವಂದಿಸಿದರು. ಶಿಕ್ಷಕರಾದ ರಾಧಾಕೃಷ್ಣ ರೈ, ಪ್ರಶಾಂತ್ ಭಟ್ ಹಾಗು ಸುಜಾತಾ ಸಾಧಕ ವಿದ್ಯಾರ್ಥಿಗಳ ವಿವರ ವಾಚಿಸಿದರು. ಶಿಕ್ಷಕಿಯರಾದ ಪವಿತ್ರಾ ರೈ, ಪ್ರತಿಮಾ ಹಾಗೂ ಕವಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here