ಆನಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆನಡ್ಕ ಇಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಶಾಲೆಗೆ ನೂತನವಾಗಿ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳನ್ನು ಕಿರೀಟ ತೊಡಿಸಿ, ಬಲೂನು ನೀಡಿ, ಬ್ಯಾಂಡ್ ವಾದ್ಯಗಳೊಂದಿಗೆ ಶಾಲಾ ಆವರಣಕ್ಕೆ ಕರೆ ತರಲಾಯಿತು. ಬಳಿಕ ಮಕ್ಕಳಿಗೆ ಆರತಿ ಬೆಳಗಿ ತಿಲಕವಿಟ್ಟು ಪುಷ್ಪವೃಷ್ಟಿ ಸುರಿಸಿ, ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಬಳಿಕ ಬಣ್ಣದ ಚಿತ್ತಾರದ ಚಟುವಟಿಕೆಯನ್ನು ಮಾಡಿಸಿ ಕಲಿಕೆಗೆ ತೊಡಗಿಸಲಾಯಿತು. ಬಳಿಕ ಮಕ್ಕಳಿಂದ ತೆಂಗಿನ ಸಸಿ ನೆಡುವುದರೊಂದಿಗೆ ಉದ್ಘಾಟಿಸಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾದಾನಿಗಳೂ ಪ್ರಗತಿಪರ ಕೃಷಿಕರು ಆದ ಬಾಲಕೃಷ್ಣ ನಾಯಕ್ ಮಜಲು ಇವರು ದೀಪ ಬೆಳಗಿಸಿ ಶುಭ ಹಾರೈಸಿದರು. ನಂತರ ಸರಕಾರದಿಂದ ಉಚಿತವಾಗಿ ವಿತರಿಸಲಾಗುವ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ನಂತರ ಶಾಲಾ ಶಿಕ್ಷಕರು ಹಾಗೂ ದಾನಿಗಳಿಂದ ನೂತನ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಹಾಗೂ ಲೇಖನ ಸಾಮಗ್ರಿಗಳು ಫೈಲ್ ಗಳನ್ನು ವಿತರಿಸಲಾಯಿತು. ಬಳಿಕ ಪೋಷಕರಿಗೆ ಸಭೆ ನಡೆಸಲಾಯಿತು. ದಾನಿಗಳಾದ ಕೇಶವ, ಸುರೇಶ್ ಹಾಗೂ ಶ್ರೀಧರ ಇವರುಗಳು ಶಾಲೆಗೆ ಮಾನಿಟರ್ ಅನ್ನು ಕೊಡುಗೆಯಾಗಿ ನೀಡಿದರು. ದಾನಿಗಳಿಂದ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಮಧ್ಯಾಹ್ನ ಸಿಹಿಯೂಟದ ಸಹ ಭೋಜನವನ್ನು ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಹರೀಶ್ ಉಪಾಧ್ಯಕ್ಷೆ ಸುಜಾತ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಸುವರ್ಣ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಛತ್ರಡ್ಕ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಕುಲಾಲ್, ಶ್ರೀರಾಮ ಭಜನಾ ತಂಡ ಆನಡ್ಕ ಇದರ ಅಧ್ಯಕ್ಷ ಗುರುಪ್ರಸಾದ್,ಎಸ್ ಡಿ ಎಮ್ ಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದ ವಿದ್ಯಾರ್ಥಿವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಫೇಲ್ಸಿಟಾ ಡಿ ಕುನ್ಹಾ ಎಲ್ಲರನ್ನೂ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಶಿಕ್ಷಕಿ ಮಾಲತಿ ಇಲಾಖಾ ಮಾಹಿತಿಗಳನ್ನು ನೀಡಿದರು. ಗೌರವ ಶಿಕ್ಷಕಿ ಸೌಮ್ಯ ವಂದನಾರ್ಪಣೆಗೈದರು .ಶಿಕ್ಷಕಿ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ನೀತಾ ಹಾಗೂ ಪೂರ್ಣಿಮಾರವರು ಸಹಕರಿಸಿದರು.