ಸಂಜಯನಗರ ಶಾಲಾ ಆರಂಭೋತ್ಸವ – ತಾಯಂದಿರ ಪಾದ ಪೂಜೆಯೊಂದಿಗೆ ಶಾಲಾ ಆರಂಭ

0

ಪುತ್ತೂರು: ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಂದಿರ ಪಾದ ಪೂಜೆಯೊಂದಿಗೆ ಶಾಲಾರಂಭೋತ್ಸವ ನಡೆಸಲಾಯಿತು.

ಶಾಲೆಗೆ ಹೊಸದಾಗಿ ಸೇರಿದ ಮಕ್ಕಳಿಗೆ ತಾಯಂದಿರ ಮೂಲಕ ಆರಗತಿ ಬೆಳಗಿಸಿ ಹೂಗುಚ್ಚ ನೀಡಿ ಪುಷ್ಪಾರ್ಚನೆ ಮಾಡಿ ಶಾಲೆಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್ ಮಕ್ಕಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಿ ಹೊಸ ವರ್ಷಕ್ಕೆ ಶುಭ ಕೋರಿದರು. ಮಕ್ಕಳಿಗೆ ಪಠ್ಯಪುಸ್ತಕ ನೀಡಿ ನಂತರ ಅವರ ತಾಯಂದಿರ ಪಾದ ಪೂಜೆ ನಡೆಸಲಾಯಿತು. ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷೆ ಲತಾ ಆನಂದ ಪೂಜಾರಿ, ಸಂಜಯ ನಗರ ಅಂಗನವಾಡಿ ಶಿಕ್ಷಕಿ ಪ್ರಮೀಳಾ ರಾವ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕುಮಾರಿ ಅಶ್ವಿತಾ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಸದಸ್ಯ ರಾಜೇಶ್ ಆಚಾರ್ಯ, ಜ್ಯೋತಿ ರಾಜೇಶ್ ಆಚಾರ್ಯ, ಸಾವಿತ್ರಿ ವಿನೋಜ್ ಕುಮಾರ್, ವಸಂತಿ ರಮೇಶ್ ಪೂಜಾರಿ, ರೆಹಮತ್, ಆಯಿಷಾ, ದಿವ್ಯ, ಪುಷ್ಪಲತಾ, ಗೀತಾ, ಅನಿಷ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ರಮೇಶ್ ಉಳಯ ಶೈಕ್ಷಣಿಕ ಮಾಹಿತಿ ನೀಡಿದರು. ಹಿರಿಯ ಶಿಕ್ಷಕಿ ಸ್ಮಿತಾಶ್ರೀ ದಿನೇಶ್ ಕಾರ್ಯಕ್ರಮ ಸಂಯೋಜಿಸಿದರು. ಅತಿಥಿ ಶಿಕ್ಷಕಿ ಸೌಮ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here