ಪುತ್ತೂರು: ಕಾಶ್ಮೀರದ ಪಹಾಲ್ಗಮ್ ನಲ್ಲಿ ನಡೆದಂತಹ 26 ಜನರ ಹತ್ಯೆಗೆ ಪ್ರತ್ಯುತ್ತರ ನೀಡಿದ ಮತ್ತು ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ವಿಜಯದಲ್ಲಿ ಭಾಗವಹಿಸಿದ ವೀರ ಸೈನಿಕ ಸುಭೇದಾರ್, ಬಿ ಎಸ್ ಎಫ್ ಕಮಾಂಡೆಂಡ್ ಪದ್ಮನಾಭ ಮಲುವೇಲು ಅವರನ್ನು ಪುತ್ತೂರು ಬಿಜೆಪಿ ವತಿಯಿಂದ ಅವರ ಮನೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರುಮಾರು ಮತ್ತು ಮಂಡಲದ ಪದಾಧಿಕಾರಿಗಳು ಪದ್ಮನಾಭ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಹಿಳೆಯರಿಂದ ಆರತಿ ಮಾಡಿ ಹಣೆಗೆ ಸಿಂಧೂರ ನೀಡಿ ಭಾರತ ದೇಶದ ಸಂಸ್ಕೃತಿಯನ್ನು ಮತ್ತೆ ನೆನಪಿಸಿದರು. ಈ ಸಂದರ್ಭದಲ್ಲಿ ಮಂಡಲ ಉಪಾಧ್ಯಕ್ಷರು ತಾಲೂಕು ಪಂಚಾಯತ್ ಮಾಜಿ ಸದಸ್ಯೆ ದಿವ್ಯ ಪುರುಷೋತ್ತಮ್, ಬನ್ನೂರು ಪಂಚಾಯತ್ ಅಧ್ಯಕ್ಷೆ ಸ್ಮಿತಾ, ಪಂಚಾಯತ್ ಮಾಜಿ ಅಧ್ಯಕ್ಷೆ ಜಯ, ಮಂಡಲ ಪ್ರಮುಖರಾದ ಪುರುಷೋತ್ತಮ್ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬೀಜತ್ರೆ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಸುನಿಲ್ ಕುಮಾರ್ ದಡ್ಡು, ಯುವರಾಜ್ ಪೆರಿಯೋತೋಡಿ, ಸುರೇಶ್ ಅತ್ರಮಜಲು, ಕಿರಣಕುಮಾರ್ ಪೆರ್ನೆ, ಮಾಜಿ ಕೊಡಿಂಬಾಡಿ ಪಂಚಾಯತ್ ಅಧ್ಯಕ್ಷರು ರಾಮಚಂದ್ರ ಪೂಜಾರಿ , ರಾಮಣ್ಣ ಗೌಡ ಗುಂಡೋಲೆ, ಬಜಾತ್ತೂರು ಪಂಚಾಯತ್ ಅಧ್ಯಕ್ಷ ಗಂಗಾಧರ್ ಬಿ ನ್, ಹಾಗು ಅವರ ಸಂಬಧಿಕರು ಮತ್ತು ಮನೆಯವರು ಹಾಗು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಸುಮಾಪದ್ಮನಾಭ ಪುತ್ರರಾದ ನಿಖಿಲ್, ನಿಹಾಲ್ ಮತ್ತು ಸಂಬಂಧಿಕರು ಈ ಸಂದರ್ಭ ಉಪಸ್ಥಿತರಿದ್ದರು.