ಕಾಂಗ್ರೆಸ್ ಸರಕಾರಕ್ಕೆ ವಿನಾಶಕಾಲೆ ವಿಪರೀತ ಬುದ್ದಿ – ಗಣರಾಜ ಭಟ್ ಕೆದಿಲ
ಪುತ್ತೂರು: ಹಿಂದು ಸಂಘಟನೆ ಮತ್ತು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ವಿರುದ್ಧ ಗಡಿಪಾರು ನೋಟೀಸ್ ನೀಡಿದ ಮತ್ತು ಸಂಘಟನೆಯ ಪ್ರಮುಖರ ಮೇಲೆ ಎಫ್ ಐ ಆರ್ ದಾಖಲಿಸಿದ ಹಾಗು ರಾತ್ರೋ ರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ತೆರಳಿ ಹಿಟ್ಲರ್ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಪಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆಯು ಜೂ.3ರಂದು ಸಂಜೆ ಪುತ್ತೂರು ಮುಕ್ರಂಪಾಡಿಯಲ್ಲಿರುವ ಸುಭದ್ರ ಸಭಾ ಮಂದಿರದಲ್ಲಿ ನಡೆಯಿತು.
ಧಾರ್ಮಿಕ ಉಪನ್ಯಾಸವನ್ನು ಗಣರಾಜ ಭಟ್ ಕೆದಿಲ ಅವರಯ ಮಾತನಾಡಿದರು. ಇವತ್ತು ಪ್ರತಿ ಹಂತದಲ್ಲೂ ಹಿಂದುಗಳೆ ಎಟು ತಿನ್ನುವುದು ಕಾಣುತ್ತದೆ. ತಲೆಕೆಟ್ಡ ಸರಕಾರ ಈ ಕೆಲಸ ಆಗುತ್ತಿದೆ. ಪುರಾಣದ ಅಧಾರದಲ್ಲಿ ಬದುಕುವ ಸನಾತನ ಧರ್ಮದಂತೆ ವಿನಾಶೆ ಕಾಲೆ ವಿಪರೀತ ಬುದ್ದಿ ಇದೆ. ಅದು ಇವತ್ತು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಕೊನೆಯ ಮೊಳೆ ಹೊಡೆಯುವ ದಿನವೇ ಈ ಹಿಂದು ಕಾರ್ತಕರ್ತರ ಗಡಿ ಪಾರು ನೋಟೀಸ್ ಆಗಿದೆ. ನಿಮ್ಮ ಗಡಿಪಾರು, ಕೇಸುಗಳು ಸಾವಿರಾರು ಬಂದರೆ ನಮಗೆ ಹೆಗಲು ಕೊಡಲು ಸಾಧ್ಯವಿದೆ. ಬಾಯಿ ಎತ್ತಿದ್ದರೆ ಹಿಂದುತ್ವದ ಬಗ್ಗೆ ಮಾತನಾಡುವ ಅರುಣ್ ಕುಮಾರ್ ಪುತ್ತಿಲ ಅವರಿಗೆ ಗಡಿಪಾರು ಆದೇಶ ನೀಡಿದ್ದಾರೆ. ಆಡಳಿತ ಪಕ್ಷಕ್ಕೆ ಮುಸಲ್ಮಾನರ ಬಾಲ ಹಿಡಿದು ನೇತಾಡುವ ಪರಿಸ್ಥಿತಿ ಬಂದಿದೆ ಎಂದರು. ರಾಜ್ಯ ಸರಕಾರಕ್ಕೆ ನಿಜ ಅಪರಾಧಿಗಳನ್ನು ಮುಟ್ಡುವ ತಾಕತ್ತು ಇವರಿಗಿಲ್ಲ ಎಂದರು.
ಹಿಂದು ಸಂಘಟನೆಯ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾಟ್ರಸ್ಟ್ ನ ಅಧ್ಯಕ್ಷ ಮಹೇಂದ್ರ ವರ್ಮ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ನ್ಯಾಯವಾದಿ ಚಿನ್ಮಯ್ ರೈ ಈಶ್ವರಮಂಗಲ, ಪುತ್ತಿಲ ಪರಿವಾರ ಟ್ರಸ್ಟ್ ನ ಗೌರವ ಸಲಹೆಗಾರ ಚಂದಪ್ಪ ಮೂಲ್ಯ, ಖಜಾಂಜಿ ಗಣೇಶ್ ಮಕರಂದ, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿ ಜೆ ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.