ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯಾಡಳಿತಕ್ಕೆ ಬೆದರಿಕೆಯೊಡ್ಡಿದ ಆರೋಪ-ಪ್ರಕರಣ ದಾಖಲು

0

ಪುತ್ತೂರು:ವ್ಯಕ್ತಿಯೋರ್ವರ ಗಡಿಪಾರಿಗೆ ಸಂಬಂಧಿಸಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಉದ್ದೇಶಪೂರ್ವಕವಾಗಿ ಗಾಳಿಸುದ್ದಿ ಹರಡಿ, ಸ್ಥಳೀಯಾಡಳಿತಕ್ಕೆ ಭಯ ಹುಟ್ಟಿಸಿ ಬೆದರಿಯೊಡ್ಡಿರುವ ಆರೋಪದಲ್ಲಿ ಕಬಕ ಗ್ರಾಮದ ಗಣೇಶ್ ಪ್ರಸಾದ್ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವ್ಯಕ್ತಿಯೋರ್ವರಿಗೆ ಗಡಿಪಾರು ಆದೇಶದ ನೊಟೀಸ್‌ಗೆ ಸಂಬಂಧಿಸಿ ವಾಟ್ಸಪ್ ಮೂಲಕ ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ಗಾಳಿ ಸುದ್ದಿಯನ್ನು ಹರಡುತ್ತಾ ಮತ್ತು ಸ್ಥಳೀಯಾಡಳಿತಕ್ಕೆ ಭಯ ಮತ್ತು ಅಪರಾಧಿ ಬೆದರಿಕೆಯನ್ನೊಡ್ಡಿದ್ದ ಕುರಿತು, ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿ ವಿರುದ್ಧ ಕಲಂ 353(1), (b), 351(3) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here