ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಲ್ಲಿ ಮುಂಗಾರು ಹಂಗಾಮ ಸಾಲ ಮತ್ತು ಠೇವಣಿ ಯೋಜನೆಗಳ ಕರಪತ್ರ ಬಿಡುಗಡೆ

0

ಉಪ್ಪಿನಂಗಡಿ :ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪ್ಪಿನಂಗಡಿ ಶಾಖೆಯಲ್ಲಿ ಮುಂಗಾರು ಹಂಗಾಮ ಸಾಲ ಮತ್ತು ಠೇವಣಿ ಯೋಜನೆಗಳ ಕರಪತ್ರ ಬಿಡುಗಡೆ ಕಾರ್ಯಕ್ರಮ ಜೂ.4ರಂದು ನಡೆಯಿತು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೆಶಕ ಗಣೇಶ್‌ ಪಿ ಅವರು ಸಾಲ ಮತ್ತು ಠೇವಣಿ ಯೋಜನೆಯ ಕರಪತ್ರವನ್ನು ಬಿಡುಗಡೆಗೊಳಿಸಿ,ಶುಭಹಾರೈಸಿದರು.

ಈ ಯೋಜನೆಯಲ್ಲಿ ಒಂದು ವರ್ಷದ ನಿರಖು ಠೇವಣಿಗೆ 10% ಶೇಕಡಾ ಮತ್ತು ಚಿನ್ನಾಭರಣ ಸಾಲಕ್ಕೆ ಪ್ರತಿ ಗ್ರಾಂ ಗೆ ರೂ.7777 ರಂತೆ ರೂ.100ಕ್ಕೆ ಬಡ್ಡಿದರ 85 ಪೈಸೆ ಮಾತ್ರ. ಇದು ಮಳೆಗಾಲದ ಮುಂಗಾರು ಹಂಗಾಮ ಆಫರ್‌ ಆಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಅಮೃತ ಸ್ಟುಡಿಯೋ ಮಾಲಕ ಜನಾರ್ದನ ಎ, ಬೀಡಿ ಕಾರ್ಮಿಕರ ಚಿಕಿತ್ಸಾಲಯದ ಡಾ. ಕೆಸಿಯಾ ಎ.ಸಿ, ಗ್ರಾಹಕರಾದ ಜಿತೇಶ್‌ ಕುಮಾರ್‌, ಜಯಶ್ರೀ ಉಪಸ್ಥಿತರಿದ್ದರು.

ಸಿಬ್ಬಂಧಿಗಳಾದ ಭವಾನಿ ಎ, ಪ್ರಫುಲ್ಲ ಕೆ ಹಾಗೂ ನಿತ್ಯನಿಧಿ ಸಂಗ್ರಾಹಕ ನೋಣಯ್ಯ, ಶಿವಪ್ರಸಾದ್‌ ಸಹಕರಿಸಿದರು.

LEAVE A REPLY

Please enter your comment!
Please enter your name here