ಮಾಡನ್ನೂರು: ಆನೆ ದಾಳಿಯಿಂದ ಬೇಸತ್ತ ಕೃಷಿಕರಿಗೆ ಮಾಹಿತಿ – ಮಾರ್ಗದರ್ಶನ ಸಭೆ

0

ಪುತ್ತೂರು: ಮಾಡನ್ನೂರು ಗ್ರಾಮದ ಸುತ್ತಮುತ್ತಲಿನ ಪರಿಸರಕ್ಕೆ ಕಾಡಾನೆ ದಾಳಿ ಮಾಡಿ ಕೃಷಿಕರ ಅಪಾರ ಪ್ರಮಾಣದ ಕೃಷಿಗೆ ಹಾನಿ ಮಾಡಿದೆ. ಕಾನೂನಿನ ಪ್ರಕಾರ ಸರಕಾರದಿಂದ ಸಿಗಬೇಕಾದ ಪರಿಹಾರ ಮತ್ತು ಮುಂದೆ ಕಾಡಾನೆಗಳ ಹಾವಳಿ ತಡೆಯುವ ಬಗ್ಗೆ ಮಾಹಿತಿ ಮಾರ್ಗದರ್ಶನ ಕಾರ್ಯ ಕಾವು ಸಮುದಾಯ ಭವನದಲ್ಲಿ ಜೂ.6ರಂದು ನಡೆಯಿತು.


ಭಾರತೀಯ ಕಿಸಾನ್ ಸಂಘದ ದ,ಕನ್ನಡ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಭಟ್ ಮಾಹಿತಿ ಮತ್ತು ಸಲಹೆ ಸೂಚನೆಗಳನ್ನು ನೀಡಿ ಮುಂದೆ ಕೃಷಿಕರಿಗೆ ಯಾವ ಸಂದರ್ಭದಲ್ಲಿಯೂ ಎಲ್ಲಾ ರೀತಿಯ ಸಹಕಾರವನ್ನು ಭಾರತಿಯ ಕಿಸಾನ್ ಸಂಘ ನೀಡಲಿದೆ ಎಂದರು.

ಮಾಹಿತಿ ಶಿಬಿರದಲ್ಲಿ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖರಾದ ಸುಬ್ರಾಯ, ಜಿಲ್ಲಾ ಕಿಸಾನ್ ಕಾರ್ಯದರ್ಶಿ ರಾಮಪ್ರಸಾದ್, ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಜನಾರ್ಧನ ರೈ ಪಡ್ಡಂಬೈಲು , ಪ್ರ, ಕಾರ್ಯದರ್ಶಿ ಮಹಾಬಲ ರೈ ಕುಕ್ಕುಂಜೋಡು, ತಾಲೂಕು ಸಮಿತಿಯ ಹಿರಿಯ ಸಲಹೆಗಾರ ಮೋಹನ್ ರೈ ನರಿಮೊಗರು, ಮಹಿಳಾ ಪ್ರಮುಖ್ ನಯನಾ ರೈ ಅರಿಯಡ್ಕ, ಕೃಷಿ ಪರಿವಾರದ ದಿವ್ಯಪ್ರಸಾದ್ ಕಾವು, ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here