ಡೆಂಗ್ಯೂ ಶಂಕೆ: ಸದಾನಂದ ಶೆಟ್ಟಿ ಕೆಮ್ಮಾರ ಗುತ್ತು ನಿಧನ

0

ಉಪ್ಪಿನಂಗಡಿ: ನಿವೃತ ಬಿಎಸ್ಸೆನ್ನೆಲ್ ನ ಉದ್ಯೋಗಿ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾದ ಸದಾನಂದ ಶೆಟ್ಟಿ ಕೆಮ್ಮಾರ (65.ವ) ಜ್ವರದಿಂದ ಜೂ.6ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಡೆಂಗ್ಯೂ ಜ್ವರದ ಶಂಕೆ ವ್ಯಕ್ತವಾಗಿದೆ.


ಕೆಮ್ಮಾರ ನಿವಾಸಿಯಾಗಿರುವ ಇವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಆಸ್ಪತ್ರೆ ಯಲ್ಲಿ ಔಷಧಿ ಪಡೆದಿದ್ದರು. ಆದರೆ ಜ್ವರ ಮತ್ತಷ್ಟು ಉಲ್ಭಣಗೊಂಡಾಗ ಪುತ್ತೂರು ಆಸ್ಪತ್ರೆ ಬಳಿಕ ಮಂಗಳೂರು ಆಸ್ಪತ್ರೆಗೆ ತೆರಳಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here