ಪಳ್ಳತ್ತಾರು ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಕಾಣಿಯೂರು: ಪ್ರವಾದಿ ಇಬ್ರಾಹಿಂ ನೆಬಿ (ಅ) ಮಗ ಇಸ್ಮಾಯಿಲ್ ನೆಬಿ (ಅ) ಹಾಗೂ ತಾಯಿ ಹಾಜರಾ ಬೀವಿ ಯವರ ತ್ಯಾಗೋಜ್ವಲವಾದ ಜೀವನ ಚರಿತ್ರೆಯನ್ನು ನಾವೆಲ್ಲಾ ಸ್ಮರಿಸಬೇಕು.ಜೀವನದಲ್ಲಿ ಕಷ್ಟಗಳು ಎದುರಾದಾಗ ದೃತಿಗೆಡಬಾರದು. ಮಾತಾಪಿತರನ್ನು ಗೌರವಿಸಬೇಕು. ಕುಟುಂಬ ಸಂಬಂಧವನ್ನು ಮುರಿಯಬಾರದು. ಜೀವನುದುದ್ದಕ್ಕೂ ಅಲ್ಲಾಹನ ಕಲ್ಪನೆಗಳನ್ನು ಪಾಲಿಸುತ್ತಾ ಅವನು ವಿರೋಧಿಸಿದ ಕಾರ್ಯಗಳನ್ನು ತ್ಯಜಿಸಿ ಜೀವಿಸಬೇಕೆಂದು ಪಳ್ಳತ್ತಾರು ಮಸೀದಿಯ ಇಮಾಮ್ ಶೆರೀಫ್ ಸಖಾಫಿ ಸತ್ತಿಕ್ಕಲ್ ಹೇಳಿದರು.


ಅವರು ಜೂ 7 ರಂದು ಪಳ್ಳತ್ತಾರು ಮಸೀದಿಯಲ್ಲಿ ಬಕ್ರೀದ್ ನಮಾಝಿಗೆ ನೇತೃತ್ವ ನೀಡಿ ಖುತುಬಾ ಪಾರಾಯಣ ನಡೆಸಿ ಈದ್ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here