ಪುತ್ತೂರು : ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ತ್ರೈಮಾಸಿಕ ಸಭೆಯು ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಕುಶಲ ನಾಗೇಶ್ ಪಟ್ಟೆಮಜಲು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವರಮಹಾಲಕ್ಷ್ಮಿ ಪೂಜೆ ಮತ್ತು ಭಗವದ್ಗೀತೆ ಶ್ಲೋಕವನ್ನು ಕಲಿಯುವ ವಿಚಾರದ ಬಗ್ಗೆ ಚರ್ಚಿಸಲಾಯಿತು. ಚಂದ್ರಾವತಿ ಪುರುಷೋತ್ತಮ್ ಬೆಂಗಳೂರು ಇವರು ಭಗವದ್ಗೀತೆಯ ತರಗತಿಯ ಮಹತ್ವವನ್ನು ತಿಳಿಸಿದರು.
ಮಹಿಳಾ ಮಂಡಲದ ಅಭಿವೃದ್ಧಿಗೆ ಪೂರಕವಾಗಿ ಸದಸ್ಯರು ನಾನಾ ಸಲಹೆಗಳನ್ನು ನೀಡುವ ಮೂಲಕ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಸರ್ವ ಸದಸ್ಯರು ಮತ್ತು ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್ ಇವರ ಸಹಕಾರದಿಂದ ಸರ್ವೆ ಅಂಗನವಾಡಿಗೆ ಬೇಬಿ ಚೇರನ್ನು ಹಸ್ತಾಂತರಿಸಲಾಯಿತು. ಇದನ್ನು ಮಹಿಳಾ ಮಂಡಲದ ನಿಕಟ ಪೂರ್ವ ಅಧ್ಯಕ್ಷೆ ಹಾಗೂ ಸರ್ವೆ ಅಂಗನವಾಡಿ ಕೇಂದ್ರದ ಶಿಕ್ಷಕಿಯೂ ಆಗಿರುವ ಮೋಹಿನಿ ಭಕ್ತಕೋಡಿ , ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸೌಮ್ಯ , ಸಹಾಯಕಿ ಕಮಲ ಮತ್ತು ಪುಟಾಣಿ ಮಕ್ಕಳು ಪ್ರೀತಿಯಿಂದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖಜಾಂಜಿ ಗೀತಾ ನಾರಾಯಣ್ ಮರಿಯ ಮತ್ತು ಮಹಿಳಾ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಭಾಗೀರಥಿ ಪ್ರಾರ್ಥಿಸಿದರು. ಸಾಧನ ರೈ ಸ್ವಾಗತಿಸಿ, ಗೀತಾ ನಾರಾಯಣ ಮರಿಯ ಧನ್ಯವಾದ ಸಮರ್ಪಿಸಿದರು. ಲಲಿತಾ ಲಕ್ಷ್ಮಣ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.