ಮಾಡನ್ನೂರು ಜುಮಾ ಮಸೀದಿಯಲ್ಲಿ ಬಕ್ರೀದ್‌ ಆಚರಣೆ

0

ಮಾನವ ಹತ್ಯೆ ಘನಘೋರ ಅಪರಾಧ- ಖತೀಬ್ ಎಸ್ ಬಿ ದಾರಿಮಿ

ಮಾಡನ್ನೂರು : ಜಗತ್ತಿನಲ್ಲಿ ಧರ್ಮ, ಜಾತಿ, ಭಾಷೆ,ವರ್ಗ,ವರ್ಣದ ಹೆಸರಲ್ಲಿ ಮನುಷ್ಯರನ್ನು ಕೊಲ್ಲುವ ಅಮಾನವೀಯ ಪದ್ದತಿಗೆ ತಿಲಾಂಜಲಿ ಹಾಕಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯ ಬೇಕೆಂಬುದೇ ಬಕ್ರೀದ್ ಆಚರಣೆಯ ಹಿಂದಿರುವ ಆಶಯ ಎಂದು ಮಾಡನ್ನೂರು ಜುಮಾ ಮಸೀದಿಯ ಖತೀಬ್ ಹಾಜಿ ಎಸ್ ಬಿ ದಾರಿಮಿ ಹೇಳಿದರು.

ಅವರು ಮಾಡನ್ನೂರು ಜುಮಾ ಮಸೀದಿಯಲ್ಲಿ ಈದ್ ಸಂದೇಶ ನೀಡಿ ಅವರು ಮಾತನಾಡಿದರು. ಜಮಾತ್ ಅಧ್ಯಕ್ಷ ಬುಶ್ರ ಅಬ್ದುಲ್ ಅಝೀಝ್,ಕಾರ್ಯದರ್ಶಿ ಬಿ ಎಂ ಅಬ್ದುಲ್ಲಾ,ಕೋಶಾಧಿಕಾರಿ ಯೂಸುಪ್ ಹಾಜಿ ಮತ್ತಿತರ ಸಮಿತಿ ಪಧಾದಿಕಾರಿಗಳು ಸೇರಿದಂತೆ ಸಾರ್ವಜನಿಕರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯ ಕೋರಿದರು. ಶುಹದಾಗಳ ದರ್ಗಾ ಶರೀಪ್ ಝೀಯಾರತ್ ನಡೆಯಿತು.

LEAVE A REPLY

Please enter your comment!
Please enter your name here