ಪುತ್ತೂರು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮವು ನಡೆಯಿತು. ಪ್ರತಿಯೊಬ್ಬ ಮಗುವು ಒಂದೊಂದು ಗಿಡವನ್ನು ನೆಟ್ಟು ಏಕ್ ಫೇಡ್ ಮಾ ಕೆ ನಾಮ್ ಎಂಬ ಅಭಿಯಾನದಲ್ಲಿ ಪಾಲ್ಗೊಂಡರು. ಇಕೋ ಕ್ಲಬ್ ವೆಬ್ ಸೈಟ್ ನಲ್ಲಿ ಗಿಡ ನೆಡುವ ಪೋಟೋ ಅಪ್ಲೋಡ್ ಮಾಡಿ ಪ್ರಮಾಣಪತ್ರ ಪಡೆದುಕೊಂಡರು.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿಗಳು ತಾಯಿಯ ಹೆಸರಿನಲ್ಲಿ ಸಿಂದೂರ ಗಿಡ ನೆಟ್ಟು ಪ್ರತಿ ಶಾಲೆಗಳಲ್ಲೂ ಮಕ್ಕಳು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನ ಆರಂಭಿಸಲು ಕರೆ ನೀಡಿದ ಪ್ರಕಾರ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲು ಕೇಂದ್ರ ಶಿಕ್ಷಣ ಸಚಿವರು ನಡೆಸಿದ ವಿಡಿಯೋ ಕಾನ್ಪರೆನ್ಸ್ ನ್ನು ವಿದ್ಯಾರ್ಥಿಗಳು ಆಲಿಸಿದರು. ಶಾಲಾ ಮುಖ್ಯಗುರು ತಾರಾನಾಥ ಪಿ ಕಾರ್ಯಕ್ರಮವನ್ನು ಸಂಘಟಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದ, ಇಕೋ ಕ್ಲಬ್ ನ ವಿದ್ಯಾರ್ಥಿಗಳು ಗಿಡ ನೆಟ್ಟರು. ಇಕೋ ಕ್ಲಬ್ ನಾಯಕ ಉದಿತ್ ವಂದಿಸಿದರು.