ಉಪ್ಪಿನಂಗಡಿ: ಇಲ್ಲಿಗೆ ಸಮೀಪದ 34 ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ಎರಡು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಬೈಕ್ ಸವಾರರು ಗಾಯಗೊಂಡ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ.
ಮಾಣಿಯಿಂದ ಉಪ್ಪಿನಂಗಡಿಯತ್ತ ಸವಾರಿ ಮಾಡುತ್ತಿದ್ದ ಎರಡು ಬೈಕ್ಗಳ ನಡುವೆ ಈ ಅಪಘಾತ ಸಂಭವಿಸಿದೆ. ನೆಕ್ಕಿಲಾಡಿಯ ಬೊಳ್ಳಾರ್ ನಲ್ಲಿ ಒಬ್ಬ ಬೈಕ್ನಾತ ಡಿಢೀರ್ ತಿರುವು ಪಡೆಯಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಘಟನೆಯಿಂದ ಒಂದು ಬೈಕಿನ ಸವಾರ ತಿರುಮಲೇಶ್ (22) , ಹಿಂಬದಿ ಸವಾರ ದರ್ಶನ್ (22) , ಇನ್ನೊಂದು ಬೈಕಿನಲ್ಲಿದ್ದ ನೌಷಾದ್ (32) ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನೌಷಾದ್ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.