ಉಪ್ಪಿನಂಗಡಿ: ಈದುಲ್ ಅಝ್ಹಾ (ಬಕ್ರೀದ್) ಆಚರಣೆಯ ಪ್ರಯುಕ್ತ ಉಪ್ಪಿನಂಗಡಿಯ ಮಾಲೀಕುದ್ದೀನಾರ್ ಜುಮಾ ಮಸೀದಿಯಲ್ಲಿ ವಿಶೇಷ ಈದ್ ನಮಾಝ್ ನಡೆಸಲಾಯಿತು. ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಫೈಝಿ ಎಡಪ್ಪಾಲ್ ದುವಾಶೀರ್ವಚನ ನೀಡಿದರು.
ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ಯೂಸುಫ್ ಹಾಜಿ, ಕಾರ್ಯದರ್ಶಿಗಳಾದ ಶುಕೂರ್ ಹಾಜಿ ಶುಕ್ರಿಯಾ, ಕೋಶಾಧಿಕಾರಿಗಳಾದ ಮುಸ್ತಾಫ ಡಬಲ್ ಫೋರ್, ಹಾರೂನ್ ಅಗ್ನಾಡಿ, ಅಶ್ರಫ್ ಸಿಟಿ, ರವೂಫ್ ಯು.ಟಿ., ಮುನೀರ್ ಎನ್ಮಾಡಿ, ಸಿದ್ದೀಕ್ ಕೆಂಪಿ, ತೌಸೀಫ್ ಯು.ಟಿ., ಶಬೀರ್ ಕೆಂಪಿ, ಇಸ್ಮಾಯೀಲ್ ತಂಙಳ್, ಇಬ್ರಾಹೀಂ ಆಚಿ, ಇರ್ಷಾದ್ ಯು.ಟಿ. ಮತ್ತಿತರರು ಉಪಸ್ಥಿತರಿದ್ದರು.