(ಜೂ.9) ಜಿಎಲ್ ಕರಿಮಣಿ ಮೇಳ- ಹಳೆಯ ಕರಿಮಣಿ ಎಕ್ಚೆಂಜ್’ಗೆ ವಿಶೇಷ ಆಫರ್

0

ಪುತ್ತೂರು: ತಾಳಿ ಕಟ್ಟುವ ಶುಭ ವೇಳೆಯಲ್ಲಿ ಹೇಳುವ ಮಂತ್ರದ ಸಾರವೆಂದರೆ, ನನ್ನ ಜೀವನಕ್ಕಾಗಿ ಈ ಮಾಂಗಲ್ಯ ತಂತುವನ್ನು ನಿನ್ನ ಕಂಠಕ್ಕೆ ಕಟ್ಟುತ್ತಿದ್ದೇನೆ. ನೀನು ನನ್ನೊಂದಿಗೆ ನೂರು ವರ್ಷಗಳ ಕಾಲ ಬಾಳುವಂತವಳಾಗು ಎಂಬುದಾಗಿದೆ. ಹಿಂದೂ ಧರ್ಮದಲ್ಲಿ ಕರಿಮಣಿಗೆ ಅದರದ್ದೇ ಆದ ಮಹತ್ವ, ಮೌಲ್ಯ ಹಾಗೂ ಅರ್ಥ ಒಳಗೊಂಡಿದೆ. ಮಂಗಳ ಅಂದರೆ ಶುಭ ಅಥವಾ ಮಂಗಳಕರ, ಸೂತ್ರ ಎಂದರೆ ದಾರ ಎಂದರ್ಥ. ಮಂಗಳಸೂತ್ರವೆಂದರೆ ಮಂಗಳಕರ ಅಥವಾ ಪವಿತ್ರ ದಾರ ಎಂಬುದಾಗಿದೆ. ಮದುವೆಯ ಸಮಯದಲ್ಲಿ ಪತಿಯದವನು ತನ್ನ ಪತ್ನಿಗೆ ಸುಮಂಗಲಿಯ ಸಂಕೇತವಾಗಿ ಮಾಂಗಲ್ಯ ಧಾರಣೆಯನ್ನು ಮಾಡುತ್ತಾನೆ. ಮಾಂಗಲ್ಯ ಸೂತ್ರವಿಲ್ಲದೆ ಒಬ್ಬ ಯುವಕ-ಯುವತಿ ವಿವಾಹವಾಗಲು ಸಾಧ್ಯವಿಲ್ಲ.


ಇಷ್ಟೊಂದು ಪ್ರಾಮುಖ್ಯತೆ ಪಡೆದ ಕರಿಮಣಿಯನ್ನು ಸುಮಂಗಲಿಯರು ಬದಲಾವಣೆ ಮಾಡಲು ಇಚ್ಛಿಸುತ್ತಿದ್ದರೆ ಜಿ.ಎಲ್.ಆಚಾರ್ಯಕ್ಕೆ ಭೇಟಿ ನೀಡಬಹುದು. ಹೌದು, ನಿಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸುವ ’ಜಿಎಲ್ ಕರಿಮಣಿ ಮೇಳ’ ಆಯೋಜನೆ ಮಾಡಿದೆ. ಜೂನ್ 9 ರಿಂದ ನಡೆಯುವ ಈ ಮೇಳದಲ್ಲಿ ಗ್ರಾಹಕರು ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿದರೆ, ಪ್ರತೀ ಗ್ರಾಂಗೆ 150 ರೂ.ಗೂ ಅಧಿಕ ದರ ಪಡೆಯಬಹುದು. ಪುತ್ತೂರು (8748877360), ಸುಳ್ಯ (9482383606), ಮೂಡಬಿದ್ರಿ (7019264213), ಹಾಸನ (9632945360) ಹಾಗೂ ಕುಶಾಲನಗರದಲ್ಲಿರುವ (7353379306) ಜಿ.ಎಲ್.ಆಚಾರ್ಯ ಮಳಿಗೆಗಳಲ್ಲಿ ಕರಿಮಣಿ ಮೇಳ ನಡೆಯಲಿದೆ.


ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕರ ಸೇವೆಗಳಿಗೆ ಸದಾ ಸಂಸ್ಥೆ ಬದ್ಧವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು ಸೇರಿದಂತೆ ಅನೇಕ ಆಭರಣಗಳ ಸಂಗ್ರಹಳಿದ್ದು, ಉತ್ತಮ ಪಾರ್ಕಿಂಗ್ ಸೌಲಭ್ಯವೂ ಒಳಗೊಂಡಿದೆ. ಗ್ರಾಹಕರು ಈ ಮೇಳದ ಸದುಪಯೋಗ ಮಾಡಿಕೊಳ್ಳುವಂತೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.



ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಆಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದೆ. ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನಾಭರಣಗಳು ಲಭ್ಯವಿದ್ದು, ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವಣ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here