ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ- ವನಮಹೋತ್ಸವ
ಯುನಿರ್ವಸಿಟಿ ಮಾದರಿಯಲ್ಲಿ ಸವಣೂರಿನಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ- ಸೀತಾರಾಮ ರೈ
ಸೀತಾರಾಮ ರೈ ಅನನ್ಯ ಶೈಲಿಯ ಸಾಧಕರು – ಬಿ.ವಿ.ಸೂರ್ಯನಾರಾಯಣ
ಪುತ್ತೂರು: ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರ 78ನೇ ಹುಟ್ಟು ಹಬ್ಬ ಆಚರಣೆ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ ಮತ್ತು ವನಮಹೋತ್ಸವ ಆಚರಣೆ ಜೂ.9ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಜರಗಿತು.

ಯುನಿರ್ವಸಿಟಿ ಮಾದರಿಯಲ್ಲಿ ಸವಣೂರಿನಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ- ಸೀತಾರಾಮ ರೈ
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸವಣೂರಿನ ಸುಂದರವಾದ ಪ್ರದೇಶದಲ್ಲಿ 25 ಎಕ್ರೆ ವಿಸ್ತೀರ್ಣದಲ್ಲಿ ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದೇನೆ. ಯುನಿರ್ವಸಿಟಿ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ನನ್ನ ತಂದೆ ಶೀಂಟೂರು ನಾರಾಯಣ ರೈಯವರ ಪ್ರೇರಣೆಯೇ ಕಾರಣ, ಮೈಸೂರು, ಬೆಂಗಳೂರಿನಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳ ಶಿಕ್ಷಣ ಸವಣೂರಿನ ವಿದ್ಯಾರಶ್ಮಿಯಲ್ಲಿ ದೊರೆಯುತ್ತದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉನ್ನತವಾದ ಸಾಧನೆಯನ್ನು ಮಾಡಿದ್ದಾರೆ, ಅದರಲ್ಲೂ ನಮ್ಮ ಸಂಸ್ಥೆಗೆ ಮೂರು ರ್ಯಾಂಕ್ ಈ ಬಾರಿ ಬಂದಿರುವುದು ನನಗಂತೂ ತುಂಬಾ ಸಂತೋಷ ತಂದಿದೆ. ಮಾದರಿ ಶಿಕ್ಷಣ ಸಂಸ್ಥೆಯಾಗಿ ಸವಣೂರು ವಿದ್ಯಾರಶ್ಮಿ ಬೆಳೆಯುತ್ತಿದೆ. ಈ ಬಾರಿ ಹೊಸದಾಗಿ 150 ಹೊಸ ಮಕ್ಕಳು ಸೇರ್ಪಡೆ ಖುಷಿ ವಿಚಾರವಾಗಿದೆ. ಆಧುನಿಕ ಸೌಲಭ್ಯದ ಶಿಕ್ಷಣ, ಸುಸಜ್ಕಿತವಾದ ಹಾಸ್ಟೆಲ್ ವ್ಯವಸ್ಥೆಯೊಂದಿಗೆ ಪರಿಪೂರ್ಣ ಶಿಕ್ಷಣ ನೀಡುವ ಶಿಕ್ಷಕ ವೃಂದ ಇರುವುದು ವಿದ್ಯಾರಶ್ಮಿಯ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿ, ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಸೀತಾರಾಮ ರೈ ಅನನ್ಯ ಶೈಲಿಯ ಸಾಧಕರು = ಬಿ.ವಿ.ಸೂರ್ಯನಾರಾಯಣ
ಬೆಳ್ಳಾರೆ ಕೆಪಿಎಸ್ನ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣರವರು ಮಾತನಾಡಿ ಸೀತಾರಾಮ ರೈಯವರಿಗೆ 78ರ ಹುಟ್ಟು ಹಬ್ಬದ ಸಂಭ್ರಮ, ಅವರಿಗೆ ನೂರು ವರ್ಷದ ಹುಟ್ಟು ಹಬ್ಬ ಸಂಭ್ರಮ ಒದಗಿ ಬರಲಿ, ಸೀತಾರಾಮ ರೈಯವರ ಅನನ್ಯ ಶೈಲಿಯ ಸಾಧಕರು, ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯದ ಕ್ಷೇತ್ರದಲ್ಲಿ ಬಿಡುವಿಲ್ಲದೇ ದುಡಿದ ಮಹಾನ್ ವ್ಯಕ್ತಿತ್ವದ ಸಾಧಕರು. ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಹತ್ತಾರು ಕಾರ್ಯಕ್ರಮವನ್ನು ಸಂಘಟಿಸಿದ ಮೇರು ವ್ಯಕ್ತಿತ್ವವನ್ನು ರೈಯವರು ಹೊಂದಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಣವನ್ನು ತಪಸ್ಸಿನಂತೆ ಕಾಯ್ದುಕೊಳ್ಳಬೇಕು. ಪಾಠವನ್ನು ಪ್ರೀತಿಯಿಂದ ಕಲಿಯಬೇಕು, ಅಂಕ ಕಡಿಮೆ ಬಂದರೆ ಬೇಸರ ಮಾಡದೇ, ಸತತ ಸಾಧನೆಯ ಮೂಲಕ ಅಂಕವನ್ನು ಹೆಚ್ಚಿಸುವ ಸಾಮಥ್ಯವನ್ನು ಹೊಂದಬೇಕು ಎಂದು ಹೇಳಿದರು.
ಪಂಜ ವ್ಯಾಪ್ತಿಯ ಡೆಪ್ಯೂಟಿವ್ ರೇಂಜ್ ಫಾರೆಸ್ಟ್ ಆಫೀಸರ್ ಸಂತೋಷ್ ರೈ ಕೆರವರು ಮಾತನಾಡಿ ಶಿಕ್ಷಣದಿಂದ ಶಕ್ತಿ ತುಂಬುವ ಕೆಲಸ ಆಗುತ್ತಿದ್ದು, ಸವಣೂರು ಸೀತಾರಾಮ ರೈಯವರ ಹುಟ್ಟು ಹಬ್ಬದ ಪ್ರಯುಕ್ತ ಅರ್ಥ ಪೂರ್ಣ ಕಾರ್ಯಕ್ರಮ ನಡೆದಿದೆ ಎಂದು ಶುಭಹಾರೈಸಿದರು
ನರಿಮೊಗರು ಡೆಪ್ಯೂಟಿವ್ ರೇಂಜ್ ಫಾರೆಸ್ಟ್ ಅಫೀಸರ್ ರಾಜೇಂದ್ರ ಕುಮಾರ್ ರವರು ಮಾತನಾಡಿ ಫಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಭಿನಂದನೆ
ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ಮತ್ತು ಡಿಸ್ಟಿಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಗೌರವಿಸಲಾಯಿತು. ವೇಧಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿಗಳಾದ ಸವಣೂರು ಎನ್ ಸುಂದರ ರೈ, ರಶ್ಮಿ ಆಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು. ಕೃಪಾಲಿ ಮತ್ತು ತಂಡದವರು ಪ್ರಾರ್ಥನೆಗೈದರು. ಉಪನ್ಯಾಸಕಿ ಶ್ರೀಕಲಾ ಶೆಟ್ಟಿ ಎಂ ಸ್ವಾಗತಿಸಿ, ಶಿಫಾಲಿ ಜೈನ್ ವಂದಿಸಿದರು. ಫಾತಿಮ ಸಬೀಬಾ ಕಾರ್ಯಕ್ರಮ ನಿರೂಪಿಸಿದರು
ಸೀತಾರಾಮ ರೈಯವರ 78 ನೇ ಹುಟ್ಟು ಹಬ್ಬ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈಯವರ 78 ನೇ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಅವರಣದಲ್ಲಿ ವನಮೋಹತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸೀತಾರಾಮ ರೈಯವರ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆಗೈದರು. ಅತಿಥಿಗಣ್ಯರು ಗಿಡ ನೆಟ್ಟರು, ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡರು.
ಸೀತಾರಾಮ ರೈಯವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಪ್ರತಿ ತರಗತಿಯ ಓರ್ವ ವಿದ್ಯಾರ್ಥಿ ಹೂ ನೀಡಿ, ಗೌರವವನ್ನು ನೀಡಿದರು. ಅತಿಥಿಗಣ್ಯರು 78ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸೀತಾರಾಮ ರೈಯವರನ್ನು ಅಭಿನಂದಿಸಿದರು. ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿಯನ್ನು ವಿತರಿಸಲಾಯಿತು.