ವಾಣಿಜ್ಯ ಬ್ಯಾಂಕುಗಳ ವಿಲೀನ, ಸಹಕಾರ ಕ್ಷೇತ್ರದ ವಿಕಸನ: ಡಾ. ಎಂ.ಎನ್. ರಾಜೇಂದ್ರ ಕುಮಾರ್
ಪುತ್ತೂರು: ದೇಶದ ಗ್ರಾಮೀಣ ಜನರ ಅಭಿವೃದ್ಧಿ ಹಾದಿಯಲ್ಲಿ ವಾಣಿಜ್ಯ ಬ್ಯಾಂಕುಗಳ ವಿಲೀನವಾದರೆ, ಜನರ ಬಳಿಗೆ ತೆರಳಿ ನೀಡುವ ಅನುಪಮ ಸೇವೆಯಿಂದ ಸಹಕಾರ ಕ್ಷೇತ್ರ ವಿಕಸನ ಹೊಂದುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು. ಅವರು ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 28ನೇ ಶಾಖೆಯನ್ನು ಹಿರಿಯಡ್ಕ ಮುಖ್ಯ ರಸ್ತೆಯ ಸರ್ವಾಣಿ ಸೌಧದ ಒಂದನೇ ಮಹಡಿಯ ಉದ್ಘಾಟಿಸಿದ ಬಳಿಕ ಶ್ರೀವೀರಭದ್ರ ಕಲಾ ಸಂಘದ ದೇವಾಡಿಗ ಭವನದಲ್ಲಿ ಜೂ.9ರಂದು ನಡೆದ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸರಕಾರ ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಇಲಾಖೆ ರೂಪಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ.
ರಾಮಕೃಷ್ಣ ಸೊಸೈಟಿ ಮುಂದಿನ ದಿನಗಳಲ್ಲಿ ಬ್ಯಾಂಕಾಗಬೇಕು.2,000ಕೋಟಿ ರೂ.ವ್ಯವಹಾರ ಗುರಿ ತಲುಪಲಿ ಎಂದು ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ದೇಶದ ಶೇ.40ರಷ್ಟು ಜನರು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಭವಿಷ್ಯದಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಲಾಗಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ರವರು ಮಾತನಾಡಿ, ಬ್ಯಾಂಕು ಮತ್ತು ಹಣ, ನೀರು ಒಂದೆಡೆ ನಿಲ್ಲದೆ ಹರಿಯಬೇಕು. ಶ್ರಮ ಸಂಸ್ಕೃತಿಯ ನಾಡಿನಲ್ಲಿ ದುಡಿಯುವ ಕೈಗಳಿಗೆ ಕೆಲಸ ಕೊಡಿ. ಸೊಸೈಟಿ ಜನ ಸೇವೆಯಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸೊಸೈಟಿ ನಿರ್ದೇಶಕರಾದ ಅರುಣ್ ಕುಮಾರ್, ಕುಂಬ್ರ ದಯಾಕರ್ ಆಳ್ವ, ಮಹಾಪ್ರಬಂಧಕ ಗಣೇಶ್ ಜಿ.ಕೆ., ಹಿರಿಯಡ್ಕ ಶಾಖಾ ವ್ಯವಸ್ಥಾಪಕ ವಿರಾಜ್ ಜೆ.ಶೆಟ್ಟಿ ಉಪಸ್ಥಿತರಿದ್ದರು.
ರಚಿತಾ ಅಡಿಗ ಪ್ರಾರ್ಥಿಸಿದರು. ಸೊಸೈಟಿ ನಿರ್ದೇಶಕ ರವೀಂದ್ರನಾಥ ಜಿ.ಹೆಗ್ಡೆ ಸ್ವಾಗತಿಸಿದರು. ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಕ್ಷ್ಮೀ ಜಯಪಾಲ್ ಶೆಟ್ಟಿ ಸಂದೇಶವನ್ನು ಧನಂಜಯ್ ಕುಮಾರ್ ವಾಚಿಸಿದರು.
ಶಿಕ್ಷಕಿ ನಳಿನಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿ ನಿರ್ದೇಶಕ ಪಿ.ಬಿ. ದಿವಾಕರ ರೈ ವಂದಿಸಿದರು.
*ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭದ್ರತಾ ಕೊಠಡಿ ಉದ್ಘಾಟಿಸಿದರು.
*ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಲಾವಣ್ಯ ಕೆ.ಆರ್. ಕಂಪ್ಯೂಟರ್ ಉದ್ಘಾಟಿಸಿದರು.
*ಗ್ರಾಹಕಿ ಯಶೋಧಾ ಶೆಟ್ಟಿ ನೀಡಿದ ನಗದನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸ್ವೀಕರಿಸಿದರು.
*ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಪೆರ್ಡೂರಿನ ಉದ್ಯಮಿ ಶಾಂತಾರಾಮ ಸೂಡ ಸ್ವೀಕರಿಸಿದರು.
*ಪ್ರಥಮ ನಿರಖು ಠೇವಣಿಯನ್ನು ನಳಿನಿ ಆರ್.ಹೆಗ್ಡೆ ಪರವಾಗಿ ರವೀಂದ್ರನಾಥ ಜಿ.ಹೆಗ್ಡೆ ಸ್ವೀಕರಿಸಿದರು.
*ಭದ್ರತಾ ಕೋಶವನ್ನು ಹಿರಿಯಡ್ಕದ ಸಿವಿಲ್ ಗುತ್ತಿಗೆದಾರ ರವೀಂದ್ರ ಪೂಜಾರಿ ಗಂಪ ಉದ್ಘಾಟಿಸಿದರು.
*ಹಿರಿಯಡ್ಕದ ಉದ್ಯಮಿ ಕೆ.ರಾಜಾರಾಮ್ ಹೆಗ್ಡೆ ಪ್ರಥಮ ಕ್ಯಾಶ್ ಸರ್ಟಿಫಿಕೇಟ್ ಸ್ವೀಕರಿಸಿದರು.
*ಕರ್ನಾಟಕ ರಾಜ್ಯ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರಿಂದ ಪ್ರಥಮ ಆರ್. ಡಿ.ಖಾತೆ ದಾಖಲೆಯನ್ನು ಸುನಿಲ್ ಸ್ವೀಕರಿಸಿದರು.
ಐದು ವರ್ಷಗಳ ಕಾರ್ಯ ಯೋಜನೆ: ಕೆ.ಜೈರಾಜ್ ಬಿ. ರೈ
ಶ್ರೀರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, 2030ರಲ್ಲಿ 2,೦೦೦ಕೋಟಿ ರೂ. ವ್ಯವಹಾರ, ಶೇ. 25ಡಿವಿಡೆಂಡ್, ಶಾಖೆಗಳ ಸಂಖ್ಯೆ 40ಕ್ಕೆ ಏರಿಕೆ ಗುರಿಯಿದೆ. ಅನುತ್ಪಾದಕ ಆಸ್ತಿ(ಎನ್ ಪಿ. ಎ)ಶೇ. ೦.1೦ ಆಗಿದ್ದು ಕಾನೂನು ಪಾಲನೆ, ಪಾರದರ್ಶಕತೆ, ವೃತ್ತಿಪರತೆಯ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.