ಪುತ್ತೂರು: “ವಿದ್ಯಾ ಜ್ಯೋತಿ” ಎಲ್.ಕೆ.ಜಿ ಯುಕೆಜಿ ತರಗತಿಯ ಉದ್ಘಾಟನೆ ಸ್ಥಳಾಂತರಗೊಂಡು ಶ್ರೀ ರಾಮಕೃಷ್ಣ ಸೇವಾ ಸಮಾಜದ ಆವರಣದಲ್ಲಿ ನಡೆಯಿತು.
ಶಿಕ್ಷಕಿ ವೇದವತಿ ಪ್ರಾರ್ಥನೆ ಮೂಲಕ ಉದ್ಘಾಟನೆಯನ್ನು ಶ್ರೀರಾಮಕೃಷ್ಣ ಸೇವಾ ಆಶ್ರಮದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೊಳತ್ತಾಯ ಕಾರ್ಯದರ್ಶಿ ಗುಣಪಾಲ್ ಜೈನ್ ಮತ್ತು ವಸಲಾರಾಜ್ಞೆ, ಹಿರಿಯ ಸೇವಕಿ ಮತ್ತು ಆನಂದಾಶ್ರಮದ ಮುಖ್ಯಸ್ಥೆ ಡಾ. ಗೌರಿ ಪೈ, ದೀಪ ಪ್ರಜ್ವಲನೆ ಮಾಡಿದರು.
ಶಿಕ್ಷಕಿ ವೇದವತಿ ಪ್ರಾರ್ಥನೆ ಮಾಡಿದರು . ರೋಟರಿ ಕ್ಲಬ್ ಪುತ್ತೂರು ಸಿಟಿ ಚಾರಿಟೇಬಲ್ ಅಧ್ಯಕ್ಷ ಜಿ. ಸುರೇಂದ್ರ ಕಿಣಿ ಸ್ವಾಗತಿಸಿ, ವಿದ್ಯಾ ಜ್ಯೋತಿ LKG/UKG ಮಧ್ಯಮ ವರ್ಗದ, ಹಾಗೂ ಗ್ರಾಮೀಣ ಪ್ರದೇಶದ ಪೋಷಕರಿಗೆ ಅನುಕೂಲವಾಗುವಂತೆ ಎರಡು ವರ್ಷಗಳಿಂದ ಸರಕಾರಿ ಶಾಲೆ ಪುತ್ತೂರು ನೆಲ್ಲಿಕಟ್ಟೆ , ಎಸ್ ಡಿ ಎಮ್ ಸಿ, ಬೇಡಿಕೆಗೆ ಸ್ಪಂದಿಸಿ ಶಾಸಕ ಅಶೋಕ ಕುಮಾರ್ ರೈ ಉದ್ಘಾಟಿಸಿ ಸಹಕಾರ ನೀಡಿದ್ದು ಶೈಕ್ಷಣಿಕ ವರ್ಷದ ಕೊನೆಗೆ 25 ವಿದ್ಯಾರ್ಥಿಗಳು ಇದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಎಸ್ ಡಿ ಎಮ್ ಸಿ ವಿವಿಧ ಕಾರಣಗಳು ನೀಡಿ ತರಗತಿ ನಿಲ್ಲಿಸುವ ಬೇಡಿಕೆ ಸಲ್ಲಿಸಿದ್ದಾರೆ. ಅತಂತ್ರ ಸ್ಥಿತಿ ನಿರ್ಮಾಣವಾಗಿ ಮುಂದಿನ ಶೈಕ್ಷಣಿಕ ತರಗತಿ ಸ್ಥಳಾಂತರಕ್ಕೆ ಶ್ರೀ ರಾಮಕೃಷ್ಣ ಸೇವಾ ಸಮಾಜದ ಆಡಳಿತ ಮಂಡಳಿ ತಾತ್ಕಾಲಿಕವಾಗಿ ತರಗತಿ ನಡೆಸಲು ರೋಟರಿ ಸಿಟಿ ಸಂಸ್ಥೆಯ ಉತ್ತಮ ಯೋಜನೆಗೆ ಮೂರು ಕೋಣೆ ಬಣ್ಣ ಹಚ್ಚಿ ಸಂಪೂರ್ಣ ಸಜ್ಜು ಮಾಡಿ ಕೊಟ್ಟಿರುತ್ತಾರೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು
ವಿಶೇಷವಾಗಿ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳಿಗೆ ಆಶೀರ್ವಾದ ಹಾಗೂ ಶುಭಾಶಯ ನುಡಿ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಭಜನೆ, ಸಂಗೀತ, ನೃತ್ಯ, ಚಿತ್ರಕಲೆ, ಭಗವದ್ಗೀತೆ ಎಲ್ಲವನ್ನು ಮಕ್ಕಳಿಗೆ ನೀಡಿ ಮಕ್ಕಳ ಭವಿಷ್ಯಕ್ಕೆ ಉತ್ತಮವಾದ ನಾಂದಿಯಾಗಲಿ ವಿದ್ಯಾ ಜ್ಯೋತಿ Lkg/Ukg ಯೋಜನೆ ನಮ್ಮಲ್ಲಿ ಸ್ಥಳಾಂತರ ಆಗಿದ್ದು ನಮಗೆ ಲಭಿಸಿದ ಭಾಗ್ಯ ಎಂದು ಶುಭ ಹಾರೈಸಿದರು.
ಗ್ರೇಸ್ಸಿ ಗೊಂನ್ಸಲ್ವಿಸ್ ಅಚ್ಚುಕಟ್ಟಿನ ವ್ಯವಸ್ಥೆ ತ್ವರಿತವಾಗಿ ಕಲ್ಪಿಸಲಾದ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು ವಿದ್ಯಾರ್ಥಿಗಳಿಗೆ ಶುಭ ನುಡಿದರು. ವೇದಿಕೆ ಮುಂಭಾಗ ರೋಟರಿ ಕ್ಲಬ್ ಪುತ್ತೂರು ಸಿಟಿಯ ಪೂರ್ವ ಅಧ್ಯಕ್ಷರಾದ ರೊ. ಜಯ ಕುಮಾರ ಎಂ ಆರ್, ರೊ. ಲಾರೆನ್ಸ್ ಗೊಂನ್ಸಲ್ವಿಸ್, ರೊ. ಜೋ ಡಿಸೋಜ ರೊ, ಮನೋಹರ್ ಕೆ, ರೊ ನಟೆಶ್ ಉಡುಪ, ರೊ. ದಯಾನಂದ
ಕಾರ್ಯದರ್ಶಿ, ರೊ. ರಾಮಚಂದ್ರ ಹಾಗೂ ಕ್ಲಬ್ ಡೈರೆಕ್ಟರ್, ರೊ. ದಯಾನಂದ, ರೊ. ಸ್ವಾತಿ ಮಲ್ಲಾರ್ ಉಪಸ್ಥಿತರಿದ್ದು ಸಹಕರಿಸಿದರು.
ಶಿಕ್ಷಕಿ ವಿನಯ, ವೇದವತಿ, ಪ್ರೀತಿ, ಆಶ್ರಮದ ಮಾತೆಯರು, ಶಿಕ್ಷಣ ಅಭಿಮಾನಿ ಸದಾಶಿವ ಪೈ ಪಿ, ನವೀನ್ ರಾವ್ ಮಂಗಳ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಬೇಡಿಕೆಗೆ ಸ್ಪಂದಿಸಿ ಸ್ಥಳಾವಕಾಶ ಮಾಡಿ ಕೊಟ್ಟ ಆಶ್ರಮದ ಗಣ್ಯರಿಗೆ ಆಡಳಿತ ಮಂಡಳಿಗೆ ಕೃತಜ್ಞತೆ ಹಾಗೂ ಧನ್ಯವಾದ ಸಲ್ಲಿಸಿದರು, ಪಾನೀಯ ಸಿಹಿ ತಿಂಡಿ, ಚಾಕೊಲೆಟ್ ನೀಡಿದ ರೋಟರಿ ಸದಸ್ಯರಿಗೆ,ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ನಿಯೋಜಿತ ಅಧ್ಯಕ್ಷ ರೊ.ಉಲ್ಲಾಸ ಪೈ ಧನ್ಯವಾದ ಸಲ್ಲಿಸಿದರು