ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜೂನ್ 11ರಂದು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಸಸ್ಯನಾಶವನ್ನು ತಡೆಗಟ್ಟಿ, ಹಸಿರನ್ನು ಉಳಿಸಿ ಬೆಳೆಸುವ ಬಗ್ಗೆ ಮಕ್ಕಳಲ್ಲಿ ಜಾಗ್ರತೆ ಮತ್ತು ತಿಳುವಳಿಕೆ ಮೂಡಿಸಲು ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಾಡು ಮಾವಿನ ಹಣ್ಣಿನ ಬೀಜ ಪ್ರಸಾರಕ್ಕಾಗಿ, ಅವುಗಳನ್ನು ಮಣ್ಣಿನೊಂದಿಗೆ ಬೀಜದುಂಡೆಗಳನ್ನಾಗಿಸಿ ಸಹಪಾಠಿಗಳಿಗೆ ಹಂಚಿದರು.

ಈ ಸಂದರ್ಭದಲ್ಲಿ ಸ್ಕೌಟ್ ಕ್ಯಾಪ್ಟನ್ ರಮೇಶ್ ಮತ್ತು ಪೂರ್ಣಿಮಾ, ಗೈಡ್ಸ್ ಕ್ಯಾಪ್ಟನ್ ಪ್ರಫುಲ್ಲ ಮತ್ತು ಲತಾ ಇವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಸಹಕರಿಸಿದರು.