ಕೊಕ್ಕಡ: ಅಡಿಕೆ ವ್ಯಾಪರಿಗೆ ವಂಚನೆ-ದೂರು

0

ನೆಲ್ಯಾಡಿ: ಅಡಿಕೆ ಖರೀದಿಸಿ ಹಣ ಪಾವತಿಸದೇ ವಂಚಿಸಲಾಗಿದೆ ಎಂದು ಆರೋಪಿಸಿ ಕೊಕ್ಕಡದ ಅಡಿಕೆ ವ್ಯಾಪಾರಿಯೋರ್ವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.


ಕೊಕ್ಕಡ ಅಪೇಕ್ಷಾ ಕಾಂಪ್ಲೆಕ್ಸ್‌ನಲ್ಲಿ ಎ-1 ಸುಪಾರಿ ಅಂಗಡಿಯಲ್ಲಿ ಕಳೆದ 15 ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಅಶ್ರಫ್ ಗ್ರಾಹಕರಿಂದ ಖರೀದಿಸಿದ 1,950 ಕಿಲೋ ಚಾಲಿ ಅಡಿಕೆಯನ್ನು ಭರತ್ ಮಂಜಿಬಾಯಿ ಮುಖಾಂತರ ನಿರಾಜ್ ಭವಿಶ್ ಬಾಯಿ ಬೋರ್ಡ್‌ನವರು ಖರೀದಿಸುವುದಾಗಿ ತಿಳಿಸಿದ್ದರು. ಅಶ್ರಫ್ ಅವರು ತಲಾ 65 ಕೆ.ಜಿ.ಯಂತೆ 30 ಚೀಲಗಳಲ್ಲಿ ಅಡಿಕೆಯನ್ನು ಜ.18ರಂದು ಸೌತ್ ಇಂಡಿಯನ್ ಟ್ರಾನ್ಸ್ ಪೋರ್ಟ್ ಇದರ ವಾಹನ ಸಂಖ್ಯೆ ಕೆಎ-21ಬಿ-1664ರಲ್ಲಿ ಸಾಗಾಟ ಮಾಡಲು ತಿಳಿಸಿದಂತೆ ಸಾಗಾಟ ಶುಲ್ಕದೊಂದಿಗೆ ಮಾರಾಟ ಇನ್ವಾಯಿಸ್ ಲಗತ್ತಿಸಿ ಕಳುಹಿಸಿಕೊಟ್ಟಿರುತ್ತಾರೆ. ಆದರೆ ಅಡಿಕೆಯನ್ನು ಖರೀದಿಸಿದ ನಿರಾಜ್ ಭವಿಶ್ ಬಾಯಿ ಬೋರ್ಡ್‌ನವರು ಮೊತ್ತ ರೂ.6,76,260 ಪಾವತಿಸುವುದಾಗಿ ತಿಳಿಸಿ ಈವರೆಗೂ ಪಾವತಿಸದೇ ವಂಚಿಸಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಅಶ್ರಫ್ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here