ನೆಲ್ಯಾಡಿ: ಕೊಣಾಲು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶರಣ್ಯ ಕೆ.ಕೆ. ಅವರು 2024-25ನೇ ಸಾಲಿನಲ್ಲಿ ನಡೆದ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಇವರು ಕೊಣಾಲು ಗ್ರಾಮದ ಕೊಂಬ್ಯಾನ ನಿವಾಸಿ ಕೆ.ಕೇಶವ ಗೌಡ ಮತ್ತು ಮೋಹಿನಿ ಎಸ್.ಅವರ ಸುಪುತ್ರಿ. ಈಕೆಯನ್ನು ಶಾಲಾ ಎಸ್ಡಿಎಂಸಿ, ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.