ಪುತ್ತೂರು: ನಗರದ ಕಲ್ಲಿಮಾರ್ ನಲ್ಲಿ ಜಿ 5 ನೆಕ್ಸಸ್ ಸಂಸ್ಥೆಯಿಂದ ನಿರ್ಮಾಣಗೊಳ್ಳಲಿರುವ ಏಂಜೆಲ್ ಗಾರ್ಡನೀಯ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಯಿತು.
ಪುತ್ತೂರು ಮಾೖದೇ ದೇವುಸ್ ಚರ್ಚ್ ನ ಸಹಾಯಕ ಧರ್ಮಗುರು ರೆ.ಫಾ.ಮರ್ವಿನ್ ಪ್ರವೀಣ್ ಲೋಬೋ ಸ್ಥಳಶುದ್ದಿ ಮತ್ತು ಧಾರ್ಮಿಕ ಪೂಜೆಯನ್ನು ನೆರೆವೇರಿಸಿದರು.
ಆ ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಭೂ ಮಾಲೀಕರರಾದ ವಿಕ್ಟರ್ ವಾಲ್ಟರ್ ಮತ್ತು ಜೆಸಿಂತಾ ಮಸ್ಕರೇಂನ್ಹಸ್, ಜಿ 5 ನೆಕ್ಸಸ್ ನ ಪಾಲುದಾರರಾದ ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು, ಯತೀಶ್ ಪೂಜಾರಿ, ಪ್ರಸಾದ್ ಕೆ ಎನ್, ನಿತಿನ್ ಪಕ್ಕಳ ಮತ್ತು ನಿತಿನ್ ಮಂಗಳ ಉಪಸ್ಥಿತರಿದ್ದರು. ಕಟ್ಟಡದ ವಿನ್ಯಾಸಕಾರ ಮಣಿಪಾಲದ ಪ್ರೊ. ಧನಪಾಲ್ ಸಮುಚ್ಚಯದಲ್ಲಿನ ವ್ಯವಸ್ಥೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಇದೇ ವೇಳೆ ನಿರ್ಮಾಣ ಸಂಸ್ಥೆ ವತಿಯಿಂದ ಭೂ ಮಾಲಿಕರಾದ ವಿಕ್ಟರ್ ವಾಲ್ಟರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ಪ್ರಭಾಕರ್ ಶೆಟ್ಟಿ ವಿಟ್ಲ, ರತನ್ ನಾಯಕ್ ಕರ್ನೂರುಗುತ್ತು, ಪ್ರೊ.ಪೌಲ್ ಹೆರಾಲ್ಡ್ ಮಸ್ಕರೇಂನ್ಹಸ್, ಜರಾಲ್ಡ್ ವೇಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ರೈ, ಪ್ರೇರಣಾ ಪುತ್ತೂರು ಇದರ ಆಡಳಿತ ನಿರ್ದೆಶಕ ಮುರಳೀಧರ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕ ಪ್ರವೀಣ್ ಕುಂಟ್ಯಾನ , ನ್ಯೂಸ್ ಪುತ್ತೂರು ಇದರ ಕಾರ್ಯ ನಿರ್ವಾಹಕ ನಿರ್ದೇಶಕ ನಾಗೇಶ್ ಕೆಡಂಜಿ, ಪ್ರೇರಣಾ ಪ್ರೊಪರ್ಟೀಸ್ ನ ಕಾರ್ಯದರ್ಶಿ ವಸಂತ ವೀರಮಂಗಳ, ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಸಂತೋಷ್ ಕುಮಾರ್ ರೈ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶೂಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು.