ಎಪಿಎಂಸಿ: ಅನಧಿಕೃತವಾಗಿ ತೆರೆದುಕೊಂಡಿದ್ದ ನಾಲ್ಕು ಗೋದಾಮಿಗೆ ಸ್ಕ್ವಾಡ್‌ನಿಂದ ಬೀಗ

0

ಪುತ್ತೂರು: ಎಪಿಎಂಸಿ ಯಾರ್ಡ್‌ನಲ್ಲಿ ಅನಧಿಕೃತವಾಗಿ ತೆರೆದಿಟ್ಟುಕೊಂಡಿದ್ದ ನಾಲ್ಕು ಗೋದಾಮುಗಳಿಗೆ ಸ್ಕ್ವಾಡ್ ಅಧಿಕಾರಿಗಳು ಬೀಗ ಹಾಕಿಸಿರುವ ಘಟನೆ ಜೂ.13ರಂದು ನಡೆದಿದೆ.

ಹಲವು ವರ್ಷಗಳ ಹಿಂದೆ ಆಗಿನ ಪ್ರಭಾರ ಕಾರ್ಯದರ್ಶಿಯವರು ಗೋದಾಮುಗಳನ್ನು ಅನಧಿಕೃತವಾಗಿ ನೀಡಿರುವ ಕುರಿತು ವರ್ತಕರು ದೂರು ನೀಡಿದ್ದರು. ಈ ಕುರಿತು ಎಪಿಎಂಸಿ ನಿರ್ದೇಶಕರ ಹಂತದಲ್ಲಿ ತನಿಖೆಯಲ್ಲಿದ್ದು, ಇದೀಗ ಸ್ಕ್ವಾಡ್ ಅಧಿಕಾರಿಗಳು ಎಪಿಎಂಸಿ ಯಾರ್ಡ್‌ಗೆ ಬಂದು ಗೋದಾಮುಗಳನ್ನು ಪರಿಶೀಲನೆ ನಡೆಸಿದ್ದಾರೆ. ಖಾಲಿಯಾಗಿರುವ ಗೋದಾಮುಗಳಿಗೆ ಬೀಗ ಹಾಕಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here