ಮುಖ್ಯಮಂತ್ರಿಯಾಗಿ ಶಿವಶನ್ಮಯಿ, ಉಪ ಮುಖ್ಯಮಂತ್ರಿಯಾಗಿ ಖದೀಜತ್ ರಿಝಾ
ಪುತ್ತೂರು: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ 2025-26ನೇ ಸಾಲಿನ ಮಂತ್ರಿಮಂಡಲವು ಮಕ್ಕಳ ಚುನಾವಣೆ ಮೂಲಕ ನಡೆದು ಮುಖ್ಯಮಂತ್ರಿಯಾಗಿ ಶಿವಶನ್ಮಯಿ ಮತ್ತು ಉಪ ಮುಖ್ಯಮಂತ್ರಿಯಾಗಿ ಖದಿಜತ್ ರಿಝಾ ಆಯ್ಕೆಯಾದರು.
ಕ್ರೀಡಾಮಂತ್ರಿಯಾಗಿ ಯಶ್ವಿತ್, ಉಪಮಂತ್ರಿಯಾಗಿ ನಿಖಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಶ್ರೀದೇವಿ, ಉಪಮಂತ್ರಿಯಾಗಿ ವರ್ಷಾ, ಸ್ವಚ್ಛತಾ ಮಂತ್ರಿಯಾಗಿ ಅಶ್ವಿನಿ, ಉಪಮಂತ್ರಿಯಾಗಿ ರುಸೈನಾ, ಆರೋಗ್ಯ ಮಂತ್ರಿಯಾಗಿ ತನುಶ್ರೀ ಉಪಮಂತ್ರಿಯಾಗಿ ಲಕ್ಷಿತಾ, ಶಿಕ್ಷಣ ಮಂತ್ರಿಯಾಗಿ ಅಬ್ಝಲ್, ಉಪಮಂತ್ರಿಯಾಗಿ ಚಿಂತನ, ನೀರಾವರಿ ಮಂತ್ರಿಯಾಗಿ ನಮೃತ್, ಉಪಮಂತ್ರಿಯಾಗಿ ನಿಖಿಲ್,ಆಹಾರ ಮಂತ್ರಿಯಾಗಿ ಶಾಶ್ವತ್, ಉಪಮಂತ್ರಿಯಾಗಿ ಸುಜಿತ್, ಗೃಹಮಂತ್ರಿಯಾಗಿ ಅಪ್ಝಲ್ ಉಪಮಂತ್ರಿಯಾಗಿ ಹಾರ್ದಿತ್, ಇಕೋಕ್ಲಬ್ ನಾಯಕನಾಗಿ ಉದಿತ್ ಕೆ.ಗೌಡ, ಉಪನಾಯಕನಾಗಿ ಮಹಮ್ಮದ್ ಹಾಸಿಂ, ಗಣಿತ ಕ್ಲಬ್ ನಾಯಕನಾಗಿ ಶಫಿಕುಲ್ ಹಸನ್, ಉಪನಾಯಕಿಯಾಗಿ ಚಾರ್ವಿ, ವಿಜ್ಞಾನ ಕ್ಲಬ್ ನಾಯಕನಾಗಿ ಅಕ್ಮಲ್ ಉಪನಾಯಕನಾಗಿ ಜಯದೀಪ್, ಸಾಹಿತ್ಯ ಕ್ಲಬ್ ನಾಯಕಿಯಾಗಿ ರೈಫಾ, ಉಪನಾಯಕಿಯಾಗಿ ಸೃಷ್ಠಿ, ಮಕ್ಕಳ ಹಕ್ಕು ನಾಯಕನಾಗಿ ಶಫಿಕುಲ್ ಹುಸೈನ್, ಉಪನಾಯಕಿಯಾಗಿ ಇಶಾನಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸಹಾಯಕರಾಗಿ ಶಿಕ್ಷಕರಾದ ಹರಿಣಾಕ್ಷಿ,ಶೋಭಾ ಹೇಮಾವತಿ ಶ್ರೀಲತಾ,ಕವಿತಾ,ಶಿಲ್ಪರಾಣಿ, ಸೌಮ್ಯ ಸಹಕರಿಸಿದರು.
