ಉಪ್ಪಿನಂಗಡಿ : ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ಹಿನ್ನಲೆ ಇಟ್ಟಿದ್ದ ಸಿಮೆಂಟ್ ಫಿಲ್ಲರ್ ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರು-ಬೆಂಗಳೂರು ಹೆದ್ದಾರಿಯ ಉಪ್ಪಿನಂಗಡಿ ಮಠ ಸಮೀಪ ನಡೆದಿದೆ.
ಉಪ್ಪಿನಂಗಡಿ ಮಠ ಸಮೀಪ ರಸ್ತೆ ಕಾಮಗಾರಿ ಹಿನ್ನಲೆ ಇಟ್ಟಿದ್ದ ಸಿಮೆಂಟ್ ಫಿಲ್ಲರ್ ಗೆ ಕಾರು ಡಿಕ್ಕಿ ಹೊಡೆದಿದ್ದು, ಅದರ ಮೇಲೆಯೇ ನಿಂತಿದೆ. ಘಟನೆಯಲ್ಲಿ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
