ಜೂ.18ರಿಂದ: ಅಗ್ನಿಪಥ್ ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ

0

ಪುತ್ತೂರು: ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ಅಗ್ನಿಪಥ್ ‘ ಯೋಜನೆಯಡಿಯಲ್ಲಿ ಪ್ರತಿ ವರ್ಷ ಅಗ್ನಿವೀರರಾಗಿ ಆಯ್ಕೆ ಮಾಡಲು ನಡೆಸಲಾಗುವ ನೇಮಕಾತಿ, ಲಿಖಿತ ಮತ್ತು ದೈಹಿಕ ಸಾಧ್ಯತೆಯ ಪರೀಕ್ಷೆಗಳಿಗೆ ಪೂರ್ವ ತಯಾರಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಜೂ. 18 ರಿಂದ ಆಹೋರಾತ್ರಿ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ತರಬೇತಿಯು ಮೂರು ವಿಭಾಗದಲ್ಲಿ ನಡೆಯಲಿದೆ.


ಸದ್ಯ ಓದುತ್ತಿರುವ ಅಥವಾ ಉದ್ಯೋಗದಲ್ಲಿದ್ದು ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಿದ್ದು , ಜೂನ್ 30 ರಿಂದ ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ರಾತ್ರಿ 7 ರಿಂದ 10 ರವರೆಗೆ ಲಿಖಿತ ಪರೀಕ್ಷಾ ನೇರ ತರಬೇತಿ ಮತ್ತು ಬೆಳಗ್ಗೆ 5 ರಿಂದ 7 ರವರೆಗೆ 2 ಗಂಟೆಗಳ ದೈಹಿಕ ಸದೃಢತೆಯ ಮೈದಾನ ತರಬೇತಿ ಇರುತ್ತದೆ.


ತರಬೇತಿ ಅವಧಿಯನ್ನು ಹೊರತುಪಡಿಸಿ ಕಾಲೇಜು/ ಉದ್ಯೋಗಕ್ಕೆ ತೆರಳಬಹುದಾಗಿದೆ. ಎರಡನೇ ವಿಭಾಗದಲ್ಲಿ ಪೂರ್ಣ ಅವಧಿಯ ತರಬೇತಿಯ ಕೂಡ ಲಭ್ಯವಿದ್ದು, ವಿದ್ಯಾಮಾತಾ ಅಕಾಡೆಮಿಯಲ್ಲಿ ಸಂಪೂರ್ಣ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಮೂರನೇ ವಿಭಾಗದಲ್ಲಿ ಇನ್ನೂ ಅರ್ಜಿ ಸಲ್ಲಿಸದೆ ಇನ್ನಷ್ಟೇ ತಯಾರಿಯನ್ನು ಮಾಡಲು ಇಚ್ಛಿಸುವ 15 ವರ್ಷದಿಂದ 21 ವರ್ಷದವರೆಗಿನ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ರವರೆಗೆ ವಿಶೇಷ ತರಬೇತಿಯ ಕೂಡ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ
ಮೊ. 9620468869/ 9148935808 (ಪುತ್ತೂರು)
ಮೊ.9448527606(ಸುಳ್ಯ)

ಅಗ್ನಿಪಥ್ ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳ ತರಬೇತಿಗಾಗಿ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದು. ಭಾರತೀಯ ಸೇನಾ ತರಬೇತಿ ಪಡೆದುಕೊಳ್ಳುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಪ್ರವೇಶಾತಿಯೊಂದಿಗೆ ಸೇನಾ ನೇಮಕಾತಿಯ ತರಬೇತಿಯು ಉಚಿತವಾಗಿರುತ್ತದೆ.
ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು ವಿದ್ಯಾಮಾತಾ ಅಕಾಡೆಮಿ.

LEAVE A REPLY

Please enter your comment!
Please enter your name here