ಬಡಗನ್ನೂರು: ಇತಿಹಾಸ ಪ್ರಸಿದ್ಧ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದವು ಪೂರ್ಣ ಪ್ರಮಾಣದಲ್ಲಿ ಜೀರ್ಣೋದ್ದಾರಗೊಂಡು 2023 ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯಿತು. ಮುಂದುವರಿದ ಅಭಿವೃದ್ಧಿಯ ಭಾಗವಾಗಿ ದೇವಸ್ಥಾನದ ಹೊರಾಂಗಣಕ್ಕೆ ಶಾಶ್ವತವಾದ ಚಪ್ಪರ ಮತ್ತು ಮಳೆ ನೀರು ಹೊರಾಂಗಣಕ್ಕೆ ಬೀಳದಂತೆ ಪೈಪ್ ಲೈನ್ ವ್ಯವಸ್ಥೆ, ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶಾಶ್ವತವಾದ ಧ್ಯಾನ ಮಂದಿರ ನಿರ್ಮಾಣ ಮತ್ತು ತೀರ್ಥ ಬಾವಿಗೆ ರಿಂಗ್ ಹಾಕಿದ್ದು, ಶ್ರೀ ಕ್ಷೇತ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಸ್ನಾನ ಗೃಹ ಮತ್ತು ಶೌಚಾಲಯ ನಿರ್ಮಾಣ, ದಕ್ಷಿಣದ ಗೋಪುರಕ್ಕೆ ಫ್ಲೋರಿಂಗ್ ಟೈಲ್ಸ್ ಅಳವಡಿಕೆ, ಮದುವೆ ಸಂದರ್ಭಗಳಲ್ಲಿ ವಧೂ -ವರರಿಗೆ ಸುಸಜ್ಜಿತವಾದ ಡ್ರೆಸ್ಸಿಂಗ್ ಕೊಠಡಿ, ಸುಸಜ್ಜಿತವಾದ ಪಾಕಶಾಲೆ ಇತ್ಯಾದಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಈ ಎಲ್ಲಾ ಕಾರ್ಯಗಳು ಭಕ್ತರ ಹಾಗೂ ದಾನಿಗಳ ಸಹಕಾರದಲ್ಲಿ ನಿರ್ಮಾಣಗೊಂಡಿದ್ದು ಈ ಬಗ್ಗೆ ಖರ್ಚು ವೆಚ್ಚಗಳ ಲೆಕ್ಕಚಾರ ಮಂಡನೆ ಮತ್ತು ಅಭಿನಂದನಾ ಬಗ್ಗೆ ಭಕ್ತರ ವಿಶೇಷ ಸಭೆಯನ್ನು ಜೂ.22 ರಂದು ಶೀ ಕ್ಷೇತ್ರದಲ್ಲಿ ಕರೆಯಲಾಗಿದೆ.
ಶ್ರೀ ದೇವರಿಗೆ ಚಿನ್ನದ ಆಭರಣ ಸಮರ್ಪಣೆ:-
ಊರ ಪರವೂರ ಭಕ್ತರಿಂದ ಒಂದು ಗ್ರಾಂ ಅರ್ಧ ಗ್ರಾಂ ಹೀಗೆ ಭಕ್ತಿ ಅನುಸಾರವಾಗಿ ಚಿನ್ನದ ಹಣ ಸಂಗ್ರಹಿಸಿ ಶ್ರೀ ದೇವರಿಗೆ ಚಿನ್ನದ ಆಭರಣ ಮತ್ತು ಮೂಲಸ್ಥಾನದಿಂದ ತೀರ್ಥ ತರುವ ಚಿನ್ನದ ಗಿಂಡೆ, ಶ್ರೀ ದೇವರಿಗೆ ಸಮರ್ಪಣೆ ಮಾಡಲಾಯಿತು.
ಶಾಶ್ವತವಾಗಿ ದೇವಸ್ಥಾನದ ಉಪಯೋಗಕ್ಕಾಗಿ ನೀಡಿದ ಜಾಗಕ್ಕೆ ತಂತಿಬೇಲಿ
ಪೇರಾಲು ದಿ. ರಮಾ ಟಿ. ಭಂಡಾರಿ ಮತ್ತು ದಿ. ಡಾ| ಕೆ.ಟಿ.ಭಂಡಾರಿಯವರ ಪುತ್ರರಾದ ಗುರುಸಂದೇಶ್ ಭಂಡಾರಿ ಮತ್ತು ಗುರುವಚನ್ ಭಂಡಾರಿಯವರು ಶಾಶ್ವತವಾಗಿ ದೇವಸ್ಥಾನದ ಉಪಯೋಗಕ್ಕಾಗಿ ನೀಡಿದ ಜಾಗಕ್ಕೆ ತಂತಿಬೇಲಿ ನಿರ್ಮಾಣ ಕಾರ್ಯ ನಡೆಸಲಾಯಿತು.
ಸಭೆಗೆ ಭಕ್ತರು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜೀರ್ಣೋದ್ದಾರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.